Advertisement

ಕೊಡಗು ಜಿಲ್ಲಾ ಸಹಕಾರ ಬ್ಯಾಂಕಿಗೆ ಆಯ್ಕೆ: ಅಭಿನಂದನೆ, ಸಮ್ಮಾನ

10:52 AM May 30, 2019 | Team Udayavani |

ಶನಿವಾರಸಂತೆ: -ಕೊಡಗು ಜಿಲ್ಲಾ ಸಹಕಾರ ಬ್ಯಾಂಕಿಗೆ ನೂತನವಾಗಿ ಆಯ್ಕೆಗೊಂಡ ಬೇಟೆಕಟ್ಟೆ ಸಮಿಪದ ಶುಂಠಿ ಗ್ರಾಮದ ಎಸ್‌.ವಿ.ಭರತ್‌ಕುಮಾರ್‌ ಅವರನ್ನು ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಅಭಿನಂದಿಸಿ, ಸಮ್ಮಾನಿಸಲಾಯಿತು.

Advertisement

ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್‌.ವಿ.ಭರತ್‌ಕುಮಾರ್‌-ರೈತರು ಕೃಷಿ ಸಹಕಾರ ಸಂಘಗಳ ಆಡಳಿತ ಮಂಡಳಿಗೆ ಸಹಕಾರ ನೀಡುತ್ತಿಲ್ಲ, ರೈತರಿಗೆ ಸರಕಾರದಿಂದ ಕೃಷಿ ಸಾಲ, ಸೇವೆ ಸೌಲಭ್ಯಕೊಡಿಸುವ ಉದ್ದೇಶದಿಂದ ಸಹಕಾರ ಸಂಘಗಳ ಆಡಳಿತ ಮಂಡಳಿಯನ್ನು ರಚಿಸಲಾಗುತ್ತದೆ, ಆಡಳಿತ ಮಂಡಳಿಗೆ ರೈತರು ಸಹಕರಿಸಿದರೆ ಮಾತ್ರ ಹೋರಾಟ ಮಾಡಲು ಸಾಧ್ಯವಾಗುತ್ತದೆ ರೈತರು ಕೃಷಿ ಸಹಕಾರ ಸಂಘಕ್ಕೆ ಸಹಕಾರ ನೀಡಿದರೆ ಮಾತ್ರ ರೈತರಿಗೆ ಉಪಯೋಗವಾಗುತ್ತದೆ, ಈ ನಿಟ್ಟಿನಲ್ಲಿ ಸಹಕಾರ ಸಂಘಗಳ ರೈತಪರ ಹೋರಾಟದಲ್ಲಿ ರೈತರು ಕೈಜೋಡಿಸುವಂತೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಎಚ್.ಆರ್‌.ಸುರೇಶ್‌, ನಿರ್ದೇಶಕರುಗಳಾದ ಮಹೇಶ್‌, ಸುನೀಲ್, ಷಡಾಕ್ಷರಿ, ಡಿ.ಜೆ.ಪವಿತ್ರ, ಮಮತ, ಕೆ.ಟಿ.ಕಾವೇರಿ, ಜಿಲ್ಲಾ ಸಕರಾ ಬ್ಯಾಂಕಿನ ಮೇಲ್ವಿಚಾರಕ ಜಯಪ್ರಕಾಶ್‌, ಸಂಘದ ಸಿಇಒ ಪರಮೇಶ್‌, ಶಿವಪ್ರಕಾಶ್‌, ಪೊನ್ನಪ್ಪ, ಕಿರಣ್‌ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next