Advertisement

ಶಂಭೂರು: ತಾಳೆ ಮರದಿಂದ ಬಿದ್ದು ಗಂಭೀರ ಸ್ಥಿತಿಯಲ್ಲಿದ್ದ ವ್ಯಕ್ತಿ ಮೃತ್ಯು

09:37 PM Apr 01, 2023 | Team Udayavani |

ಬಂಟ್ವಾಳ: ಶಂಭೂರಿನಲ್ಲಿ ಶೇಂದಿ ತೆಗೆಯಲು ತಾಳೆ ಮರ ಹತ್ತಿ ಬಿದ್ದು ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲ್ಪಟ್ಟ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಮಾ. 31ರಂದು ರಾತ್ರಿ ನಡೆದಿದೆ.

Advertisement

ಶಂಭೂರು ಗ್ರಾಮದ ಕುಂದಾಯಗೋಳಿ ನಿವಾಸಿ ಲೋಕಯ್ಯ ಪೂಜಾರಿ(52) ಅವರು ಮೃತಪಟ್ಟ ದುಧೈವಿ. ಅವರು ಮೇಸ್ತ್ರಿ ಕೆಲಸದ ಜತೆಗೆ ತಾಳೆ ಮರದಿಂದ ಶೇಂದಿ ತೆಗೆಯುವ ಕಾರ್ಯವನ್ನೂ ಮಾಡುತ್ತಿದ್ದರು. ಮಾ. 31ರಂದು ಎಂದಿನಂತೆ ಶಂಭೂರಿನ ಕೊಂಕನರಕೋಡಿಯಲ್ಲಿ ತಾಳೆ ಮರದಿಂದ ಶೇಂದಿ ತೆಗೆಯುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾರೆ.

ತತ್‌ಕ್ಷಣ ಅವರನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next