Advertisement

Road ಅಲ್ಲಿ ಹೋಗುವವರು ಕಂಪ್ಲೆಂಟ್ ಕೊಟ್ಟರೆ ಅರೆಸ್ಟಾ?: ಬಿಎಸ್ ವೈ ಪರ ಶಾಮನೂರು

08:54 PM Jun 14, 2024 | Team Udayavani |

ದಾವಣಗೆರೆ: ಯಾರೋ ದಾರಿಯಲ್ಲಿ ಹೋಗುತ್ತಿರುವವರು ಕಂಪ್ಲೆಂಟ್ ಕೊಟ್ಟ ತಕ್ಷಣ ಅರೆಸ್ಟ್ ಎಂದರೆ ಏನರ್ಥ ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಪ್ರಶ್ನಿಸಿದರು.

Advertisement

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತ್ರಸ್ತ ಬಾಲಕಿಯ ತಾಯಿ ಒಟ್ಟು53 ಜನರ ವಿರುದ್ಧವೂ ಕಂಪ್ಲೆಂಟ್ ಕೊಟ್ಟಿದ್ದಾರೆ. ಹೀಗೆ ಕಂಪ್ಲೆಂಟ್ ಕೊಟ್ಟಿರುವುದಕ್ಕೆ ಬೆಲೆ ಇರುತ್ತದೆಯಾ ಎನ್ನುವ ಮೂಲಕ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಪರ ಬ್ಯಾಟ್ ಬೀಸಿದ್ದಾರೆ.

ಯಾವುದೋ ಹೆಣ್ಣು ಮಗಳು ಕಂಪ್ಲೇಟ್ ಕೊಟ್ಟರೆ ಏನು ಅರ್ಥ. ಕೊಟ್ಟಿರುವ ಕಂಪ್ಲೆಂಟ್ ಪ್ರಕಾರ ಎಲ್ಲ ಸಾಬೀತಾದರೆ ಮಾತ್ರ ಕ್ರಮ ಆಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ದರ್ಶನ್ ಪ್ರಕರಣಕ್ಕೆ ನಮ್ಮದು ವಿರೋಧ ಇದೆ. ಕಾಮೆಂಟ್ ಹಾಕಿದ್ದಾನೆ ಎಂದು ಸಾಯುವ ಹಾಗೇ ಹೊಡೆಯ ಬಾರದಿತ್ತು. ಬುದ್ಧಿವಾದ ಹೇಳಿ ಕಳಿಸಬೇಕಿತ್ತು. ದರ್ಶನ್ ವಿರುದ್ಧ ಕ್ರಮಕ್ಕೆ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದಿಂದ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next