Advertisement

ಶಾಮನೂರು ಶಿವಶಂಕರಪ್ಪ ಪ್ರಚಾರ

12:33 PM Nov 10, 2019 | Suhan S |

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ, ಹಿರಿಯ ಕಾಂಗ್ರೆಸ್ಸಿಗ ಶಾಮನೂರು ಶಿವಶಂಕರಪ್ಪ ಶನಿವಾರ 18 ಮತ್ತು 22 ನೇ ವಾರ್ಡ್‌ನ ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿದರು.

Advertisement

ಮಹಾನಗರ ಪಾಲಿಕೆಯ 18ನೇ ವಾರ್ಡ್‌ ಅಭ್ಯರ್ಥಿ ಪಿ.ಎನ್‌. ಚಂದ್ರಶೇಖರ್‌ ಪರ ಕಾಯಿಪೇಟೆ ಇತರೆಡೆ ಪ್ರಚಾರ ನಡೆಸಿ, ಕಾಂಗ್ರೆಸ್‌ ಗೆಲ್ಲಿಸುವಂತೆ ಮನವಿ ಮಾಡಿದರು. ಅಭ್ಯರ್ಥಿ ಪಿ.ಎನ್‌. ಚಂದ್ರಶೇಖರ್‌, ವಾರ್ಡ್‌ ಅಧ್ಯಕ್ಷ ಜಿ.ಟಿ.ಪರಮೇಶ್‌, ಮುಖಂಡರಾದ ಕಾಶೀನಾಥ್‌(ಫೋಟೋ ಕಾಶಿ), ಬನ್ನಿಕಟ್ಟೆ ವಿಜಯಕುಮಾರ್‌, ಎನ್‌. ಎಂ.ಆಂಜನೇಯ, ಕರೆಶಿವಪರ ಸಿದ್ದೇಶ್‌, ಬಾಳೆಹೊಲದ ರೇವಣಸಿದ್ದಪ್ಪ, ರಾಜು ಭಂಡಾರಿ, ರಾಘವೇಂದ್ರ ಶೆಟ್ಟಿ, ಸಚಿನ್‌ ಬನ್ನಿಕಟ್ಟೆ, ಸೊಸೈಟಿ ಸಂಜು, ಲೊಕೇಶ್‌, ಮಂಜುನಾಥ್‌, ಇನಾಯತ್‌, ರಾಕಿ, ಅರ್ಜುನ, ಅಯೂಬ್‌ ಮತ್ತಿತರರಿದ್ದರು.

22ನೇ ವಾರ್ಡ್‌: ಮಹಾನಗರ ಪಾಲಿಕೆಯ 22ನೇ ವಾರ್ಡ್‌ ಅಭ್ಯರ್ಥಿ ದೇವರಮನೆ ಶಿವಕುಮಾರ್‌ ಪರ ಯಲ್ಲಮ್ಮ ನಗರ ಇತರೆಡೆ ಪ್ರಚಾರ ಕೈಗೊಂಡರು. ಅಭ್ಯರ್ಥಿ ದೇವರಮನೆ ಶಿವಕುಮಾರ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಬಿ.ಮಂಜಪ್ಪ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಳ್ಳಿ ರಮೇಶ್‌, ಉದ್ಯಮಿಗಳಾದ ಅಥಣಿ ವೀರಣ್ಣ, ಎಸ್‌.ಕೆ.ವೀರಣ್ಣ, ಮುಖಂಡರಾದ ಕೃಷ್ಣಮೂರ್ತಿ, ಡಿ.ಕೆ. ರಮೇಶ್‌, ಚೆಲುವಪ್ಪ, ಖಾಸೀಂಸಾಬ್‌, ಮುಜಾಹಿದ್‌, ಅಪ್ಪಾಜಿ ರವಿ, ನಾಗರಾಜಗೌಡ, ಶಂಭು ಉರೇಕೊಂಡಿ, ರಮೇಶ್‌, ಶುಭಮಂಗಳ, ಸುನಿತಾ ಭೀಮಣ್ಣ, ಅನ್ನಪೂರ್ಣಮ್ಮ, ರಾಧಾಬಾಯಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next