Advertisement

ನೂತನ ಆರ್‌ಬಿಐ ಗವರ್ನರ್‌ ಆಗಿ ಶಕ್ತಿಕಾಂತ ದಾಸ್‌ ನೇಮಕ

07:11 PM Dec 11, 2018 | udayavani editorial |

ಹೊಸದಿಲ್ಲಿ : ಊರ್ಜಿತ್‌ ಪಟೇಲ್‌ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ  ಕೇಂದ್ರ ಸರಕಾರ ಇಂದು ಮಂಗಳವಾರ ಶಕ್ತಿಕಾಂತ ದಾಸ್‌ ಅವರನ್ನು ಭಾರತೀಯ ರಿಸರ್ವ್‌ ಬ್ಯಾಂಕಿನ ನೂತನ ಗವರ್ನರ್‌ ಆಗಿ ನೇಮಿಸಿತು.

Advertisement

ಈ ಬಗ್ಗೆ ಸಚಿವ ಸಂಪುಟದ ನೇಮಕಾತಿ ಸಮಿತಿಯು ಇಂದು ಮಂಗಳವಾರ ಅಧಿಸೂಚನೆಯೊಂದನ್ನು ಹೊರಡಿಸಿತು.

ಶಕ್ತಿಕಾಂತ ದಾಸ್‌ ಅವರು ದಿಲ್ಲಿಯ ಸೈಂಟ್‌ ಸ್ಟೀಫ‌ನ್‌ ಕಾಲೇಜಿನ ಹಳೆ ವಿದ್ಯಾರ್ಥಿ; ಮಾಜಿ ಹಣಕಾಸು ಕಾರ್ಯದರ್ಶಿ ಮತ್ತು ಹಣಕಾಸು ಆಯೋಗದ ಹಾಲಿ ಸದಸ್ಯ. 

ಮಾಜಿ ಸರಕಾರಿ ಅಧಿಕಾರಿ ಶಕ್ತಿಕಾಂತ ದಾಸ್‌ ಅವರು 15ನೇ ಹಣಕಾಸು ಆಯೋಗದ ಸದಸ್ಯರಾಗಿದ್ದು  2018ರ ಜಿ20 ಶೃಂಗದಲ್ಲಿ ಅವರನ್ನು ಭಾರತದ ಶೇರ್ಪಾ ಎಂದು ನೇಮಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next