Advertisement

ಆಡ್ವಾಣಿ ಕ್ಷೇತ್ರದಲ್ಲಿ ಅಮಿತ್‌ ಶಾ ನಾಮಪತ್ರ

02:18 AM Mar 31, 2019 | Team Udayavani |

ಗಾಂಧಿನಗರ: ಲೋಕಸಭೆ ಚುನಾವಣೆ ಕಾವು ಜೋರಾಗುತ್ತಿದ್ದು, ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಆಡ್ವಾಣಿ ಅವರು ಪ್ರತಿನಿಧಿಸುತ್ತಿದ್ದ ಗಾಂಧಿ ನಗರ ಕ್ಷೇತ್ರದಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಶನಿವಾರ ನಾಮಪತ್ರ ಸಲ್ಲಿಸಿದರು.

Advertisement

ಇದಕ್ಕೂ ಮುನ್ನ ಮೆಗಾ ರೋಡ್‌ ಶೋ ನಡೆಸಿದ ಶಾಗೆ ಕೇಂದ್ರ ಸಚಿವರಾದ ಜೇಟ್ಲಿ, ರಾಜನಾಥ್‌ ಸಿಂಗ್‌, ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ, ಗುಜರಾತ್‌ ಸಿಎಂ ರೂಪಾಣಿ ಸೇರಿದಂತೆ ಪ್ರಮುಖರು ಸಾಥ್‌ ನೀಡಿದರು. ಜತೆಗೆ ಅಹಮದಾಬಾದ್‌ನಲ್ಲಿ ನಡೆದ ಬೃಹತ್‌ ರ‍್ಯಾಲಿ ಮತ್ತು ರೋಡ್‌ಶೋನಲ್ಲಿ ಎನ್‌ಡಿಎಯ ಇತರ ನಾಯಕರೂ ಭಾಗಿಯಾಗಿದ್ದರು. ರ‍್ಯಾಲಿಯಲ್ಲಿ ಮಾತನಾಡಿದ ಶಾ, ದೇಶದ ಜನರು ಕಳೆದ 70 ವರ್ಷಗಳಿಂದ ಕಾಯುತ್ತಿದ್ದ ನಾಯಕನನ್ನು ಮೋದಿಯವರಲ್ಲಿ ಕಂಡರು. ದೇಶದ ಚುಕ್ಕಾಣಿಯನ್ನು ಯಾರು ಹಿಡಿಯಬೇಕು ಎಂಬ ಏಕೈಕ ವಿಚಾರವನ್ನು ಮುಂದಿಟ್ಟುಕೊಂಡು ಈ ಚುನಾವಣೆ ಎದುರಿಸಲಾಗುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next