Advertisement

ಬಿಸಿಲು ನಾಡಿನಲ್ಲಿ ಸಸಿ ಬೆಳೆಸುವುದು ಅನಿವಾರ್ಯ

04:31 PM Jun 08, 2019 | Team Udayavani |

ಶಹಾಪುರ: ಅಭಿವೃದ್ಧಿ ನೆಪದಲ್ಲಿ ಮಾನವ ಪರಿಸರ ಜೊತೆಗೆ ಅರಣ್ಯವನ್ನು ನಾಶ ಮಾಡುವ ಮೂಲಕ ಕಟ್ಟಡಗಳನ್ನು ನಿರ್ಮಿಸುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧಿಧೀಶೆ ಭಾಮಿನಿ ಹೇಳಿದರು.

Advertisement

ಇಲ್ಲಿನ ನ್ಯಾಯಾಲಯ ಆವರಣದಲ್ಲಿ ಶುಕ್ರವಾರ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅರಣ್ಯ ಇಲಾಖೆ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಸಿ ನೆಡುವ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಿಸಿಲು ನಾಡಿನಲ್ಲಿ ಸಸಿಗಳನ್ನು ಬೆಳೆಯವುದು ಅನಿವಾರ್ಯವಿದೆ. ಪ್ರತಿಯೊಬ್ಬರು ತಮ್ಮ ತಮ್ಮ ಮನೆ ಮುಂದೆ ಸಸಿಗಳನ್ನು ನೆಟ್ಟು ಪಾಲನೆ ಮಾಡಬೇಕು.ಇಲ್ಲಿನ ನ್ಯಾಯಾಲಯದಲ್ಲಿ 100ಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಿರುವುದು ಸಂತೋಷದ ವಿಷಯ. ಗಿಡ ಬೆಳೆಸಿರುವುದರಿಂದ ಇಲ್ಲಿ ಉತ್ತಮ ವಾತಾವರಣವಿದೆ ಎಂದರು.

ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಮಹ್ಮದ್‌ ಅಸದ್‌ ಮಾಹಿತಿ ನೀಡಿ, ತಾಲೂಕಿನಲ್ಲಿ ಪ್ರಸಕ್ತ ಬಾರಿ ಹೊಂಗೆ, ಬೇವು, ನೇರಳೆ ಸೇರಿದಂತೆ ವಿವಿಧ ತಳಿಯ 27 ಸಾವಿರ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಅದರಂತೆ ತಾಲೂಕಿನ 41 ಗ್ರಾಮ ಪಂಚಾಯತಿಗಳಿಗೆ ಪ್ರತಿ ಗ್ರಾಪಂಗೆ 100 ಸಸಿಗಳನ್ನು ನೆಡುವ ಗುರಿ ಹೊಂದಿದ್ದು, ರಸ್ತೆ ಬದಿಯಲ್ಲಿ 30 ಸಾವಿರ ಸಸಿಗಳನ್ನು ನೆಡುವ ಉದ್ದೇಶ ಹೊಂದಲಾಗಿದೆ. ವಡಿಗೇರಾ ತಾಲೂಕಿನ ಬಿಳಾØರ, ಕಂದಳ್ಳಿ, ಹಾಲಗೇರಾ ಗ್ರಾಮದ ವ್ಯಾಪ್ತಿಯಲ್ಲಿ 20 ಸಾವಿರ ಸಸಿಯನ್ನು ಹಾಕಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಎಚ್.ಆರ್‌. ಕುಲಕರ್ಣಿ, ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧಿಧೀಶ ಕಾಡಪ್ಪ ಹುಕ್ಕೇರಿ, ವಕೀಲರ ಸಂಘದ ಅಧ್ಯಕ್ಷ ಸಾಲೋಮನ್‌ ಆಲ್ಪ್ರೆಡ್‌, ಕಾರ್ಯದರ್ಶಿ ಸಂತೋಷ ಸಂತ್ಯಂಪೇಟೆ, ವಕೀಲರಾದ ಅಮರೀಶ ದೇಸಾಯಿ ಮತ್ತು ಮಲ್ಲಿಕಾರ್ಜುನ ಬುಕ್ಕಲ್ಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next