Advertisement

ಶೆಟ್ಟಿಕೇರಾ ಕ್ವಾರಂಟೈನ್‌ ಕೇಂದ್ರ ಸ್ಥಳಾಂತರಕ್ಕೆ ಆಗ್ರಹ

12:33 PM May 17, 2020 | Naveen |

ಶಹಾಪುರ: ಶೆಟ್ಟಿಕೇರಾ ಗ್ರಾಮದ ಶಾಲೆಯಲ್ಲಿ ಕ್ವಾರಂಟೈನ್‌ ಕೇಂದ್ರ ಸ್ಥಾಪಿಸಲಾಗಿದ್ದು, ಇಲ್ಲಿ ಮಹಾರಾಷ್ಟ್ರದಿಂದ ಆಗಮಿಸಿದ್ದ ಸುಮಾರು 30 ಜನರನ್ನು ಕ್ವಾರಂಟೈನ್‌ ಮಾಡಲಾಗಿದೆ. ಆದರೆ ಕ್ವಾರಂಟೈನ್‌ ನಲ್ಲಿರುವವರ ಸಂಬಂಧಿ ಕರು ಗ್ರಾಮದಲ್ಲಿದ್ದು, ಅವರೊಂದಿಗೆ ಹೊರಗಡೆ ಬಂದು ಓಡಾಡುತ್ತಿದ್ದಾರೆ. ಆದ್ದರಿಂದ ಕೂಡಲೇ ಕ್ವಾರಂಟೈನ್‌ ನಲ್ಲಿ ಇರುವವರನ್ನು ಬೇರಡೆ ಕೇಂದ್ರಕ್ಕೆ ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ತಹಶೀಲ್ದಾರ್‌ಗೆ ಮನವಿ ಮಾಡಿದ್ದಾರೆ.

Advertisement

ಕ್ವಾರಂಟೈನ್‌ನಲ್ಲಿ ಇರುವವರು ಗ್ರಾಮದಲ್ಲಿನ ಅವರ ಸಂಬಂಧಿಕರೊಂದಿಗೆ ಹೊರಗಡೆ ಬಂದು ಓಡಾಡುತ್ತಿದ್ದಾರೆ. ಗ್ರಾಮಸ್ಥರು ಈ ಬಗ್ಗೆ ಪ್ರಶ್ನಿಸಿದರೆ ಅವರ ಸಂಬಂಧಿ ಕರೊಡನೆ ಕಿರಿಕಿರಿ ಉಂಟಾಗುತ್ತಿದೆ. ಕೂಡಲೇ ಇಲ್ಲಿನ ಕ್ವಾರಂಟೈನ್‌ ಕೇಂದ್ರ ತೆಗೆದುಹಾಕಿ ವಲಸೆ ಕಾರ್ಮಿಕರನ್ನು ಬೇರಡೆ ಕೇಂದ್ರಕ್ಕೆ ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next