Advertisement

ಬಿಇಒ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ

02:55 PM Jul 06, 2019 | Naveen |

ಶಹಾಪುರ: ಇಲ್ಲಿನ ಸಾರ್ವಜನಿಕ ಕ್ಷೇತ್ರ ಶಿಕ್ಷಣ ಅಧಿಕಾರಿ ರ್ವತನೆ ಖಂಡಿಸಿ ಮತ್ತು ಅವರ ಮೇಲೆ ಜೀವ ಬೆದರಿಕೆ ಪ್ರಕರಣ ದಾಖಲಾಗಿದ್ದು, ಈ ಕುರಿತು ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಡಾ| ಅಂಬೇಡ್ಕರ್‌ ಬಹುಜನ ಸಂಘ ತಹಶೀಲ್ದಾರ್‌ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ರಾಯಪ್ಪ ಸಾಲಿಮನಿ, ಬಿಇಒ ಅವರು ಶಾಲಾ ದುರಸ್ತಿಗಾಗಿ ಸರ್ಕಾರ ನೀಡಿದ 20 ಲಕ್ಷ ರೂ. ಅನುದಾನ ದುರ್ಬಳಕೆ ಮಾಡಿಕೊಂಡಿದ್ದು, ಈ ಕುರಿತು ಮಾಹಿತಿ ಕೇಳಿದರೆ, ನನಗೆ ಕರೆ ಮಾಡಿ ಜೀವ ಬೆದರಿಕೆಯೊಡ್ಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಜೂನ್‌ 18ರಂದು ಬಿಇಒ ಅವರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದೇನೆ. ಪ್ರಕರಣ ದಾಖಲು ಮಾಡಿ ಹದಿನೈದು ದಿನ ಕಳೆದರು ಇದುವರೆಗೂ ಯಾವುದೇ ಕ್ರಮಕ್ಕೆ ಪೊಲೀಸರು ಮುಂದಾಗದಿರುವುದು ಸೋಜಿಗವಾಗಿದೆ. ಬಿಇಒ ಅವರ ರ್ವತನೆ ಖಂಡನೀಯವಾಗಿದೆ. ಯಾವುದೇ ಇಲಾಖೆ ಮಾಹಿತಿ ಕೇಳಿದರೂ ನೀಡುವುದಿಲ್ಲ. ಮನಬಂದಂತೆ ವರ್ತನೆ ಮಾಡುತ್ತಾರೆ ಂದರು.

ಶಾಲಾ ದುರಸ್ತಿ ನೆಪದಲ್ಲಿ ಲಕ್ಷಾಂತರ ರೂ. ಹಣ ದುರ್ಬಳಕೆಯಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಯಬೇಕು. ಮತ್ತು ಕೂಡಲೇ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿರುವುದರಿಂದ ಅವರನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಶರಣಪ್ಪ ಭೂತಾಳಿ, ಹಯ್ನಾಳಪ್ಪ ದೇವಕರ್‌, ಚಂದ್ರಶೇಖರ ಹತ್ತಿಗೂಡೂರ, ಮರೆಪ್ಪ ಸಲಾದಪುರ, ಶರಣಪ್ಪ ಅಣಬಿ, ಬಸವರಾಜ ಸಾವೂರ, ನಾಗರಾಜ ಬೊಮ್ಮನಳ್ಳಿ, ದೇವೀಂದ್ರ ಗೌಡೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next