Advertisement

3 ತಿಂಗಳಿಂದ ಸಿಗದ ಮಾಸಾಶನ: ಆರೋಪ

05:23 PM Jun 05, 2019 | Naveen |

ಶಹಾಬಾದ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಸಾಮಾಜಿಕ ಭದ್ರತಾ ಯೋಜನೆಗಳಾದ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ, ವಿಧವಾ ವೇತನ ಮಾಸಾಶನ ಕಳೆದ ಮೂರು ತಿಂಗಳಿಂದ ದೊರಕಿಲ್ಲ ಎಂದು ರಾಘವೇಂದ್ರ ಮಂದಿರ ಮುಂಭಾಗ ಮತ್ತು ಪಕ್ಕದ ಗಿಡದ ಕೆಳಗೆ ಮಂಗಳವಾರ ಸೇರಿದ್ದ 60ಕ್ಕೂ ಹೆಚ್ಚು ಫಲಾನುಭವಿಗಳು ಆರೋಪಿಸಿದರು.

Advertisement

ಅಂಚೆ ಕಚೇರಿಯಲ್ಲಿ ಹಣ ನೀಡಬೇಕಾದ ಸಿಬ್ಬಂದಿಯೊಬ್ಬರು ತಮಗೆ ಮನಸ್ಸಿಗೆ ಬಂದ ಸ್ಥಳದಲ್ಲಿ ಕರೆದು ಸತಾಯಿಸುತ್ತಿದ್ದಾರೆಂದು ಫಲಾನುಭವಿಗಳು ಆರೋಪಿಸಿದರು. ಪ್ರತಿ ತಿಂಗಳು ಮಾಸಾಶನ ಪಡೆಯಬೇಕಾದರೆ 100 ರೂ. ಕೊಡಬೇಕು. ಕೊಡದಿದ್ದರೆ ನಮ್ಮ ಮಾಸಾಶನ ಬಂದಿಲ್ಲ ಎಂದು ಸತಾಯಿಸುತ್ತಾರೆ ಎಂದು ಹಿರಿಯ ನಾಗರಿಕರೊಬ್ಬರು ದೂರಿದರು. ಅಂಚೆ ಕಚೇರಿ ಸಿಬ್ಬಂದಿ ಕರ್ತವ್ಯ ಮರೆತು ದೇವಸ್ಥಾನ ಮುಂಭಾಗ ಅಥವಾ ಯಾವುದೋ ಗಿಡದ ಕೆಳಗೆ ಕರೆದು ಹಣ ನೀಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಮಾಸಾಶನ ಪಡೆಯುವವರು ತಿಂಗಳಲ್ಲಿ ಒಂದು ದಿನ ಪೋಸ್ಟ್‌ಮ್ಯಾನ್‌ಗೆ ಕಾಯುವ ಪರಿಸ್ಥಿತಿ ಬಂದೊದಗಿದೆ. ಕೂಡಲೇ ಅಂಚೆ ವ್ಯವಸ್ಥಾಪಕರು ಅಂಚೆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ಪ್ರವೀಣ ರಾಜನ್‌ ಆಗ್ರಹಿಸಿದರು.

ಮನವಿ: ನಮ್ಮ ಬ್ಯಾಂಕ್‌ ಖಾತೆಗೆ ನೇರವಾಗಿ ಮಾಸಾಶನ ಹಾಕಿದರೆ ಇಷ್ಟೆಲ್ಲ ಸಮಸ್ಯೆಯಾಗಲ್ಲ. ಅಲ್ಲದೇ ಬಿಸಿಲಿನಲ್ಲಿ ಕಾಯುವ ಪರಿಸ್ಥಿತಿ ಬರೊಲ್ಲ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಬ್ಯಾಂಕ್‌ ಖಾತೆಗೆ ಹಣ ಹಾಕುವ ಕೆಲಸ ಮಾಡಬೇಕೆಂದು ಫಲಾನುಭವಿಗಳು ಮನವಿ ಮಾಡಿದರು.

ಈಗಾಗಲೇ ನಮ್ಮ ಸಿಬ್ಬಂದಿ ಮೇಲೆ ದೂರುಗಳು ಬಂದಿವೆ. ಮಾಸಾಶನ ವಿತರಣೆಗೆ ಲಂಚ ಪಡೆಯುತ್ತಿರುವ ಬಗ್ಗೆ ದೂರು ಸಲ್ಲಿಸಿದರೆ ಅದನ್ನು ಮೇಲಧಿಕಾರಿಗಳಿಗೆ ತಿಳಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ವಾಣಿ ಕುಲಕರ್ಣಿ,
ಪೋಸ್ಟ್‌ ಮಾಸ್ಟರ್‌, ಶಹಾಬಾದ

Advertisement

Udayavani is now on Telegram. Click here to join our channel and stay updated with the latest news.

Next