Advertisement

ವಿದ್ಯಾರ್ಥಿಗಳ ಬೇಡಿಕೆ ಈಡೇರಿಕೆಗೆ ಆಗ್ರಹ

11:36 AM May 27, 2020 | Naveen |

ಶಹಾಬಾದ: ವಿದ್ಯಾರ್ಥಿಗಳ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಮಂಗಳವಾರ ಎಐಡಿಎಸ್‌ಒ ಸಮಿತಿಯಿಂದ ಮೇ 26 ಅಖೀಲ ಕರ್ನಾಟಕ ಆಗ್ರಹ ದಿನದ ಅಂಗವಾಗಿ ಉಪ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

Advertisement

ಕೋವಿಡ್ ಸಂಕಷ್ಟದ ಸಮಯದಲ್ಲಿ ಬಡ-ಮಧ್ಯಮ ವರ್ಗದ ವಿದ್ಯಾರ್ಥಿಗಳ ಶಾಲೆ- ಕಾಲೇಜುಗಳ ಶುಲ್ಕ, ಸಾರಿಗೆ ವ್ಯವಸ್ಥೆ, ಹಾಸ್ಟೆಲ್‌ಗ‌ಳ ಮೂಲ ಸೌಕರ್ಯಗಳಿಗೆ ಸಂಬಂಧಿಸಿದಂತೆ ಅನೇಕ ಶೈಕ್ಷಣಿಕ ಸಮಸ್ಯೆಗಳು ಎದುರಾಗುತ್ತಿವೆ. ಆದ್ದರಿಂದ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲಾ-ಕಾಲೇಜುಗಳ ಶುಲ್ಕವನ್ನು ಸರ್ಕಾರವೇ ಭರಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ಎಐಡಿಎಸ್‌ಒ ಅಧ್ಯಕ್ಷ ತುಳಜರಾಮ ಎನ್‌.ಕೆ, ಉಪಾಧ್ಯಕ್ಷ ರಮೇಶ ದೇವಕರ್‌, ಕಾರ್ಯದರ್ಶಿ ರಘು ಜಿ.ಮಾನೆ, ಸಹ ಕಾರ್ಯದರ್ಶಿ ತೆಜಸ್‌ ಆರ್‌.ಐ, ಕಿರಣ ಜಿ.ಮಾನೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next