Advertisement

Y+ Security: ಜವಾನ್, ಪಠಾಣ್ ಯಶಸ್ಸಿನ ಬೆನ್ನಲ್ಲೇ ಜೀವ ಬೆದರಿಕೆ… ಶಾರುಖ್ ಗೆ Y+ ಭದ್ರತೆ

10:13 AM Oct 09, 2023 | Team Udayavani |

ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಅವರ “ಪಠಾಣ್” ಮತ್ತು “ಜವಾನ್” ಗಳ ಚಿತ್ರಗಳ ಯಶಸ್ಸಿನ ಬೆನ್ನಲೇ ನಟನಿಗೆ ಜೀವ ಬೆದರಿಕೆ ಬರತೊಡಗಿದ್ದು ಇದೀಗ ಮಹಾರಾಷ್ಟ್ರ ಸರಕಾರ ನಟನ ಭದ್ರತೆಯನ್ನು Y+ ಗೆ ಹೆಚ್ಚಿಸಿದೆ.

Advertisement

ಇತ್ತೀಚಿನ ಹಿಟ್ ಚಿತ್ರಗಳಾದ ಪಠಾಣ್ ಹಾಗೂ ಜವಾನ್ ಚಿತ್ರಗಳು ಭಾರಿ ಯಶಸ್ಸು ಕಂಡಿದ್ದು ಇದರ ಬೆನ್ನಲ್ಲೇ ನಟನಿಗೆ ಬೆದರಿಕೆಗಳು ಬರತೊಡಗಿದೆ ಇದರ ಹಿನ್ನೆಲೆಯಲ್ಲಿ ಉನ್ನತ ಸಮಿತಿಯು ಶಾರುಖ್ ಗೆ ಹೆಚ್ಚಿನ ಭದ್ರತೆ ಒದಗಿಸುವಂತೆ ಸರಕಾರಕ್ಕೆ ಶಿಫಾರಸ್ಸು ಮಾಡಿದ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಿದೆ ಎಂದು ಮೂಲಗಳು ತಿಳಿಸಿವೆ.

ಶಾರುಖ್ ಖಾನ್ ಅವರಿಗೆ ಆರು ಜನ ಪೊಲೀಸ್ ಕಮಾಂಡೋಸ್​ಗಳನ್ನು ಬಾಡಿಗಾರ್ಡ್ ಆಗಿ ನಿಯೋಜಿಸಲಾಗುತ್ತದೆ. ಮಹಾರಾಷ್ಟ್ರ ಪೊಲೀಸ್ ಯುನಿಟ್​ನಿಂದ ಸಶಸ್ತ್ರ ಬಾಡಿಗಾರ್ಡ್​ಗಳನ್ನು ನಿಯೋಜಿಸಲಾಗಿದೆ. ಅಲ್ಲದೆ ಮುಂಬೈ ನಿವಾಸದಲ್ಲೂ ಭದ್ರತಾ ಸಿಬಂದಿಗಳು ಇಪ್ಪತ್ತನಾಲ್ಕು ಗಂಟೆಗಳ ಕಾಲ ಕಾರ್ಯ ನಿರ್ವಹಿಸಲಿದೆ ಎಂದು ಹೇಳಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ನಟ ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಬ್ಲಾಕ್‌ ಟು ಬ್ಯಾಕ್‌ ಬ್ಲಾಕ್ ಬಾಸ್ಟರ್ ಸಿನಿಮಾಗಳನ್ನು ನೀಡಿದ ಬೆನ್ನಲ್ಲೇ ತನಗೆ ಕೊಲೆ ಬೆದರಿಕೆಗಳು ಬರುತ್ತಿವೆ ತನ್ನ ಭದ್ರತೆ ಹೆಚ್ಚಿಸುವಂತೆ ಮನವಿ ಮಾಡಿದ್ದರು. ಈ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರವು ನಟನಿಗೆ ಒದಗಿಸಲಾದ ಭದ್ರತೆಯನ್ನು ಹೆಚ್ಚಿಸಲು ನಿರ್ಧರಿಸಿತು ಎಂದು ಹೇಳಿದ್ದಾರೆ.

ಇದನ್ನೂ ಓದಿ: Assembly Elections: ಪಂಚರಾಜ್ಯ ವಿಧಾನಸಭಾ ಚುನಾವಣೆಗೆ ಇಂದೇ ದಿನ ನಿಗದಿ

Advertisement
Advertisement

Udayavani is now on Telegram. Click here to join our channel and stay updated with the latest news.

Next