Advertisement

Manipur: ಮಣಿಪುರ ಶಾಂತಿಗಾಗಿ ಶಾ ಭೇಟಿಯಾದ ಐಟಿಎಲ್‌ಎಫ್ 

07:44 PM Aug 09, 2023 | Team Udayavani |

ಇಂಫಾಲ: ಸಂಘರ್ಷಪೀಡಿತ ಮಣಿಪುರದಲ್ಲಿ ಶಾಂತಿ ಸ್ಥಾಪಿಸುವ ಸಾಮೂಹಿಕ ಪ್ರಯತ್ನದ ಭಾಗವಾಗಿ ರಾಜ್ಯದ ವಿವಿಧ ಬುಡಕಟ್ಟು ಸಮುದಾಯಗಳ ಸದಸ್ಯರನ್ನೊಳಗೊಂಡ ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ಐಟಿಎಲ್‌ಎಫ್) ನಿಯೋಗದ ಸದಸ್ಯರು ಬುಧವಾರ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿ, ತಮ್ಮ ವಿವಿಧ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

Advertisement

ಈ ಕುರಿತು ಐಟಿಎಲ್‌ಎಫ್ ಕಾರ್ಯದರ್ಶಿ ಮುವಾನ್‌ ಮಾಹಿತಿ ನೀಡಿದ್ದು, ಅಸ್ಸಾಂ ರೈಫ‌ಲ್ಸ್‌ನ 27 ರೈಫ‌ಲ್ಸ್‌ ಕಚೇರಿ ಮೂಲಕ ಕಳೆದ ವಾರವೇ ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿ ಪತ್ರಿ ಸಲ್ಲಿಸಿದ್ದೆವು. ಅದರಂತೆ ರಾಜ್ಯದ ಜನಾಂಗೀಯ ಸಂಘರ್ಷದ ಕುರಿತ ಮಾತುಕತೆ ನಡೆಸಲು ಖುದ್ಧು ಶಾ ಅವರೇ ಆಹ್ವಾನವನ್ನೂ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಿಯೋಗವು ಅವರನ್ನು ಭೇಟಿಯಾಗಿ 5 ಪ್ರಮುಖ ಬೇಡಿಕೆಗಳನ್ನು ಸಚಿವರ ಮುಂದಿಟ್ಟಿದೆ. ಅದರಲ್ಲಿ ಮಣಿಪುರದಲ್ಲಿನ ಬುಡಕಟ್ಟು ಜನಾಂಗಗಳ ಸಂಪೂರ್ಣ ಪ್ರತ್ಯೇಕತೆ ವ್ಯವಸ್ಥೆ, ಮೈತೇಯಿ ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಅನುವು ಹಾಗೂ ಕುಕಿ-ಮೈತೇಯಿ ಸಂಘರ್ಷ ಪರಿಹಾರದ ವಿಚಾರವೂ ಸೇರಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next