Advertisement

ಇಂದಿನಿಂದ ಅಯ್ಯಪ್ಪ ದೇಗುಲಕ್ಕೆ ಪ್ರವೇಶ

12:51 AM Nov 16, 2020 | mahesh |

ಶಬರಿಮಲೆ: ಶಬರಿಮಲೆಯ ಅಯ್ಯಪ್ಪ ದೇಗುಲವನ್ನು ರವಿವಾರ ತೆರೆಯಲಾಗಿದೆ. ಅರ್ಚಕ ಎ.ಕೆ. ಸುಧೀರ್‌ ನಂಬೂದಿರಿ ಸಂಜೆ 5 ಗಂಟೆಗೆ ದೇಗುಲದ ಬಾಗಿಲು ತೆರೆದರು. ಆದರೆ ಯಾವುದೇ ವಿಶೇಷ ಪೂಜೆಗಳು ನಡೆಯಲಿಲ್ಲ. ಸೋಮವಾರದಿಂದ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ಮುಂದಿನ ಎರಡು ತಿಂಗಳ ವರೆಗೆ ದೇಗುಲಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ ಇದೆ. ಕೊರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಸೇರಿದಂತೆ ಕಟ್ಟು ನಿಟ್ಟಿನ ನಿಯಮಗಳನ್ನು ಕೇರಳ ಸರಕಾರ ಮತ್ತು ದೇವಸ್ವಂ ಬೋರ್ಡ್‌ ಜಾರಿಗೊಳಿಸಿದೆ.

Advertisement

ಆನ್‌ಲೈನ್‌ ಮೂಲಕ ದರ್ಶನಕ್ಕೆ ಬುಕ್‌ ಮಾಡಿದವರಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಪ್ರತೀ ದಿನ ಒಂದು ಸಾವಿರ ಭಕ್ತರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ನಿಳಕ್ಕಲ್‌ ಮತ್ತು ಪಂಪಾ ಶಿಬಿರವನ್ನು ಪ್ರವೇಶಿಸುವ 24 ತಾಸುಗಳ ಒಳಗಾಗಿ ಸೋಂಕು ಇಲ್ಲ ಎಂಬ ಬಗ್ಗೆ ಪ್ರಮಾಣ ಪತ್ರವನ್ನು ಭಕ್ತರು ಕಡ್ಡಾಯವಾಗಿ ಹೊಂದಿರಬೇಕು. ದೇಗುಲ ಆವರಣದಲ್ಲಿ ತಂಗಲು ಅವಕಾಶವೇ ಇಲ್ಲ. ತಿರುವಾಂಕೂರು ದೇವಸ್ವಂ ಮಂಡಳಿ ನೀಡಿದ ಮಾಹಿತಿ ಪ್ರಕಾರ ಪ್ರಸಕ್ತ ಸಾಲಿನಲ್ಲಿ 85 ಸಾವಿರ ಮಂದಿ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next