Advertisement

ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿ ಕೊಂದವನ ಬಂಧನ

09:59 AM May 18, 2017 | Harsha Rao |

ಹಾವೇರಿ: ವಿಕೃತ ಕಾಮುಕನೊಬ್ಬ ಅಪ್ರಾಪ್ತ ಬಾಲಕನನ್ನು ತನ್ನ ಕಾಮತೃಷೆಗೆ ಬಳಸಿಕೊಂಡು ಕೊಲೆ ಮಾಡಿದ ಹೃದಯ
ವಿದ್ರಾವಕ ಘಟನೆ ಶಿಗ್ಗಾವಿ ತಾಲೂಕಿನ ಬಂಕಾಪುರ ಸಮೀಪದ ಮಲ್ಲನಾಯಕನಕೊಪ್ಪದಲ್ಲಿ ಮಂಗಳವಾರ ಸಂಜೆ ನಡೆದಿದೆ. ಅದೇ ಗ್ರಾಮದ ಸುಭಾಷ ಸುಭಾಸ ಅಗಸಿಮನಿ (40) ಎಂಬಾತ ಮೂರನೇ ತರಗತಿ ಓದುವ ಮಲ್ಲಿಕಾರ್ಜುನ
ಶೆಟ್ಟಣ್ಣನವರ (9) ಎಂಬ ಬಾಲಕನನ್ನು ಮಟನ್‌ ಸಾಂಬಾರ್‌ ಕೊಡುವುದಾಗಿ ಹೇಳಿ ಪುಸಲಾಯಿಸಿ, ಬೈಕ್‌ನಲ್ಲಿ ಸಮೀಪದ ಅರಣ್ಯಕ್ಕೆ ಕರೆದೊಯ್ದು, ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೆ, ಕೊಲೆ ಮಾಡಿದ್ದಾನೆ. ಮಧ್ಯಾಹ್ನ ಹೊರ ಹೋಗಿದ್ದ ಮಗ ಸಂಜೆಯಾದರೂ ಮರಳದ ಹಿನ್ನೆಲೆಯಲ್ಲಿ ಗಾಬರಿಗೊಂಡ ಪಾಲಕರು ಹುಡುಕಾಡಿ, ಕೊನೆಗೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಬುಧವಾರ ಗ್ರಾಮದಲ್ಲಿ ವಿಚಾರಣೆ ನಡೆಸಿ ಸುಭಾಷ ಅಗಸಿಮನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೃತ್ಯ ಬೆಳಕಿಗೆ ಬಂದಿದೆ. ಆರೋಪಿ ಕೆಲ ವರ್ಷಗಳ ಹಿಂದೆ ತನ್ನ ಮಗಳ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿ ಗ್ರಾಮಸ್ಥರ ಕೈಗೆ ಸಿಕ್ಕು ಧರ್ಮದೇಟು ತಿಂದಿದ್ದ.

Advertisement
Advertisement

Udayavani is now on Telegram. Click here to join our channel and stay updated with the latest news.

Next