Advertisement
ಮುಂಗಾರು ಮಳೆ ಸುರಿದು ಎರಡು ಅಥವಾ ಮೂರನೇ ವಾರದಲ್ಲಿ ಗದ್ದೆ ಕೆಲಸಗಳಿಗೆ ರೈತರು ಇಳಿಯುತ್ತಾರೆ. ಕಳೆದ ವರ್ಷವನ್ನು ಬಿಟ್ಟರೆ ಹಿಂದಿನ ಎರಡು ವರ್ಷಗಳಲ್ಲಿ ಇದಕ್ಕೆ ವ್ಯತಿರಿಕ್ತವಾದ ವಾತಾವರಣ ನಿರ್ಮಾಣವಾಗಿತ್ತು. ತಡವಾಗಿ ಮುಂಗಾರು ಮಳೆ ಸುರಿದ ಕಾರಣ ಹಾಗೂ ನಿರೀಕ್ಷೆಯ ಮಳೆ ಸುರಿಯದೆ ಭತ್ತದ ಕೃಷಿಯೂ ತಡವಾಗಿ ಆರಂಭಗೊಂಡಿತ್ತು. ಈ ಬಾರಿಯೂ ಅದೇ ವಾತಾವರಣ ನಿರ್ಮಾಣವಾಗಿದೆ.
ಭತ್ತದ ಕೃಷಿಯಲ್ಲಿ ಗದ್ದೆ ಉಳುವುದರಿಂದ ಹಿಡಿದು ಭತ್ತದ ಫಸಲನ್ನು ಕೊೖಲು ಮಾಡುವವರೆಗೂ ಬಳಸುವ ಯಂತ್ರಗಳು ಇಂದು ಲಭ್ಯವಿವೆ. ಕೂಲಿ ಕಾರ್ಮಿಕರ ಕೊರತೆ ಇರುವುದರಿಂದ ಭತ್ತದ ಕೃಷಿಕರೂ ಯಂತ್ರೋಪಕರಣಗಳನ್ನು ನಿಧಾನವಾಗಿ ಅನುಸರಿಸುತ್ತಿದ್ದಾರೆ. ಯಂತ್ರಗಳ ಮೂಲಕ ಒಂದೆರಡು ದಿನಗಳಲ್ಲಿ ಕೆಲಸಗಳನ್ನು ಪೂರೈಸಲು ಸಾಧ್ಯವಿರುವುದರಿಂದ ಮಳೆ ಸರಿಯಾಗಿ ಸುರಿದರೆ ಕೂಡಲೇ ಭತ್ತ ಕೃಷಿ ವೇಗವನ್ನು ಪಡೆಯುತ್ತದೆ.
ಗುರಿ ಸಾಧಿಸುವ ನಿರೀಕ್ಷೆ
ಉತ್ಪಾದನಾ ವೆಚ್ಚ, ಕಾರ್ಮಿಕರ ಕೊರತೆ, ಫಸಲಿನ ಕೊರತೆ ಮೊದಲಾದ ಕಾರಣಗಳಿಂದ ಭತ್ತ ಬೆಳೆಯುವವರ ಸಂಖ್ಯೆ ಇಳಿಕೆಯ ಹಾದಿಯಲ್ಲಿದೆ. 2010-11ರಲ್ಲಿ ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ 3,400 ಹೆಕ್ಟೇರ್ ಪ್ರದೇಶಗಳಲ್ಲಿ ಮುಂಗಾರಿನಲ್ಲಿ ಭತ್ತ ಬೆಳೆಯುತ್ತಿದ್ದರೆ 2016- 17ನೇ ಸಾಲಿಗೆ ಇದು 2,500 ಹೆಕ್ಟೇರ್ಗೆ ಆಗಿತ್ತು. ಆದರೆ ಈ ಬಾರಿ ಕೃಷಿ ಇಲಾಖೆಗೆ ಮುಂಗಾರಿನಲ್ಲಿ 900 ಹೆಕ್ಟೇರ್ ಭತ್ತದ ಬೇಸಾಯದ ಗುರಿಯಷ್ಟೇ ಇದೆ.
••ರಾಜೇಶ್ ಪಟ್ಟೆ