Advertisement

ರೋಗಿಗಳ ಸೇವೆಯೇ ದೇವರಿಗೆ ಸಲ್ಲಿಸುವ ನಿಜ ಸೇವೆ- ಶಿವಯೋಗಿ ರಾಜೇಂದ್ರ ಸ್ವಾಮೀಜಿ

05:05 PM Aug 19, 2024 | Team Udayavani |

ಉದಯವಾಣಿ ಸಮಾಚಾರ
ಮಹಾಲಿಂಗಪುರ: ವೈದ್ಯರನ್ನು ಜೀವಂತ ದೇವರ ಸ್ವರೂಪದಲ್ಲಿ ಕಾಣುವ ರೋಗಿಗಳ ಸೇವೆಯೇ ಭಗವಂತನಿಗೆ ಮತ್ತು ಸಮಾಜಕ್ಕೆ ಸಲ್ಲಿಸುವ ನಿಜವಾದ ಸೇವೆಯಾಗಿದೆ ಎಂದು ಮಹಾಲಿಂಗೇಶ್ವರ ಮಠದ ಪೀಠಾಧಿಪತಿ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ಡಾ|ವಿಜಯ ಹಂಚಿನಾಳ ಅವರ ಅನುಪ ಆಸ್ಪತ್ರೆ ಹಾಗೂ ಹಾರ್ಟಕೇರ್‌ ಸೆಂಟರ್‌ಲ್ಲಿ ನೂತನವಾಗಿ ಆರಂಭಿಸುತ್ತಿರುವ ಅತ್ಯಾಧುನಿಕ ಸೌಲಭ್ಯವುಳ್ಳ ನಾಲ್ಕು ನೂತನ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಡಾ| ಹಂಚಿನಾಳ ಕುಟುಂಬವು ಕಳೆದ ಮೂರು ದಶಕಗಳ ಆರೋಗ್ಯಸೇವೆಯಿಂದಾಗಿ ಬಾಗಲಕೋಟೆ- ಬೆಳಗಾವಿ, ವಿಜಯಪುರ ಜಿಲ್ಲೆಗಳ ವೈದ್ಯಕೀಯ ಕ್ಷೇತ್ರದಲ್ಲಿ ಖ್ಯಾತಿ ಪಡೆದಿರುವ ಕುಟುಂಬವಾಗಿದೆ.

ಮಹಾಲಿಂಗಪುರದಂತಹ ಪಟ್ಟಣದಲ್ಲಿ ಮಹಾನಗರಗಳಲ್ಲಿ ಇರುವಂತಹ ಅತ್ಯಾಧುನೀಕ ಸೌಲಭ್ಯಯುಳ್ಳ ಘಟಕಗಳನ್ನು ಆರಂಭಿಸಿದ್ದು, ಈ ಭಾಗದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.

ನಾಲ್ಕು ನೂತನ ಘಟಕಗಳ ಉದ್ಘಾಟನೆ: ಅನುಪ ಆಸ್ಪತ್ರೆಯಲ್ಲಿ ನೂತನವಾಗಿ ಆರಂಭಿಸಿರುವ ಹೃದಯರೋಗಕ್ಕೆ ಸಂಬಂಧಿಸಿದ ಕಾರ್ಡಿಯಾಕ್‌ ಕ್ಯಾತ ಲ್ಯಾಬ್‌, ಸ್ತ್ರೀ ರೋಗಗಳಿಗೆ ಸಂಬಂ  ವೂಮೆನ್ಸ್‌ ಕ್ಲಿನಿಕ್‌, ವಿವಿಧ ಶಸ್ತ್ರಚಿಕಿತ್ಸಾ ರೋಗಿಗಳ ಸಂಬಂಧಿಸಿದ ಮ್ಯಾಡೂಲರ್‌ ಆಪರೇಷನ್‌ ಥಿಯೇಟರ್‌, ತುರ್ತು ರೋಗಿಗಳ ಸಂಬಂಧಿಸಿದ ಆಯ್‌ .ಸಿ.ಸಿ.ಯು(ತುರ್ತು ನಿಗಾ ಘಟಕ) ಸೇರಿದಂತೆ ನಾಲ್ಕು ಘಟಕಗಳನ್ನು ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಉದ್ಘಾಟಿಸಿದರು.

ಅತಿಥಿಗಳಾಗಿ ಭಾಗವಹಿಸಿದ್ದ ಬೆಳಗಾವಿಯ ನರರೋಗ ತಜ್ಞ ಡಾ| ಜಿ.ಎಂ.ವಾಲಿ, ಮಹಾಲಿಂಗಪುರದ ಶಸ್ತ್ರ ಚಿಕಿತ್ಸಾತಜ್ಞ ಡಾ| ಎ.ಆರ್‌ .ಬೆಳಗಲಿ ಮಾತನಾಡಿ, ಡಾ| ಅನೂಪ ಮತ್ತು ಡಾ| ಅಪೂರ್ವ ಹಂಚಿನಾಳ ದಂಪತಿ ಹುಟ್ಟೂರು ಮತ್ತು ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನರ ಸೇವೆ ಮಾಡಬೇಕೆಂಬ ಸಂಕಲ್ಪದೊಂದಿಗೆ ಪಟ್ಟಣದಲ್ಲಿ ಸುಸಜ್ಜಿತ ಆಸ್ಪತ್ರೆ ಆರಂಭಿಸಿ ಈ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಮುಂದಾಗಿದ್ದು ಸ್ವಾಗತಾರ್ಹ. ಭವಿಷ್ಯದಲ್ಲಿ ಅನುಪ ಆಸ್ಪತ್ರೆ ಹಾಗೂ ಹಾರ್ಟ್‌ಕೇರ್‌ ಸೆಂಟರ್‌ ಜೊತೆಗೆ ಇಂದು ಪ್ರಾರಂಭವಾದ ವಿವಿಧ ಘಟಕಗಳೊಂದಿಗೆ ಅನುಪ ಆಸ್ಪತ್ರೆ ಹಾಗೂ ಹಾರ್ಟಕೇರ್‌ ಸೆಂಟರ್‌ ಆಸ್ಪತ್ರೆಯು
ಈ ಭಾಗದಲ್ಲಿನ ರೋಗಿಗಳ ಪಾಲಿನ ಸಂಜೀವಿನಿಯಾಗಿ ಬೆಳೆದು, ಉತ್ತಮ ಆರೋಗ್ಯ ಸೇವೆ ನೀಡಲಿ ಎಂದು ಶುಭ ಹಾರೈಸಿದರು.

Advertisement

ಅನುಪ ಆಸ್ಪತ್ರೆಯ ಮುಖ್ಯಸ್ಥರಾದ ಡಾ| ವಿಜಯ ಹಂಚಿನಾಳ ಮಾತನಾಡಿ, ಕಳೆದ ಮೂರು ದಶಕಗಳಿಂದ ಆಸ್ಪತ್ರೆಯು ಜನರಿಗೆ ಉತ್ತಮ ಆರೋಗ್ಯ ಸೇವೆನೀಡುತ್ತಾ ಬಂದಿದೆ. ಇದೀಗ ಮಹಾಲಿಂಗಪುರದ ಜನತೆಯು ಹೆಚ್ಚಿನ ಆರೋಗ್ಯ ಚಿಕಿತ್ಸೆಗಾಗಿ ಬೇರೆ ಬೇರೆ ಮಹಾನಗರಗಳಿಗೆ ಹೋಗುವುದನ್ನು ತಪ್ಪಿಸುವದಕ್ಕಾಗಿ, ರೋಗಿಗಳಿಗೆ ಅವಶ್ಯವಿರುವ ಎಲ್ಲ ಚಿಕಿತ್ಸೆಗಳನ್ನು ಒಂದೇ
ಆಸ್ಪತ್ರೆಯ ಅಡಿಯಲ್ಲಿ ನೀಡುವ ಉದ್ದೇಶದಿಂದ ನೂತನವಾಗಿ 4 ಪ್ರತ್ಯೇಕ ಘಟಕ ಆರಂಭಿಸಿದ್ದೇವೆ. ನುರಿತ ಹಾಗೂ ತಜ್ಞವೈದ್ಯರ ತಂಡವನ್ನು ಒಳಗೊಂಡ ಅನುಪ ಆಸ್ಪತ್ರೆಯು 24ಗಿ7 ಆರೋಗ್ಯ ಸೇವೆ ಒದಗಿಸಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಡಾ|ಅನೂಪ ಹಂಚಿನಾಳ, ಡಾ| ಎಂ.ಜಿ.ಹಿರೇಮಠ, ಡಾ|ಅಪೂರ್ವ ಹಂಚಿನಾಳ, ನಲಿನಿ ಹಂಚಿನಾಳ, ಡಾ| ಸುಭಾಶಿನಿ ಹಿರೇಮಠ, ಡಾ| ಎಂ.ಜಿ.ಹಿರೇಮಠ ಇದ್ದರು. ಅನುಪ ಆಸ್ಪತ್ರೆಯ ನೂತನ ಘಟಕಗಳನ್ನು  ಪ್ರಾರಂಭಿಸಿದ ಡಾ|ವಿಜಯ ಹಂಚಿನಾಳ, ಡಾ|ಅನುಪ ಹಂಚಿನಾಳ ಅವರಿಗೆ ತೇರದಾಳ ಶಾಸಕ ಸಿದ್ದು ಸವದಿ ಸೇರಿದಂತೆ ವಿವಿಧ ಊರುಗಳ ವೈದ್ಯರು, ಉದ್ಯಮಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಶುಭ ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next