Advertisement

ಸೇವೆ ಬ್ರಾಹ್ಮಣ್ಯದ ದ್ಯೋತಕ: ಡಾ|ಪಿ. ಅನಂತಕೃಷ್ಣ ಭಟ್‌

11:28 PM May 06, 2019 | Sriram |

ಮಹಾನಗರ: ಅಧ್ಯಯನ, ಅಧ್ಯಾಪನದ ಜತೆಗೆ ಸೇವೆ ಕೂಡ ಬ್ಯಾಹ್ಮಣ್ಯದ ಲಕ್ಷಣ ಎಂದು ಡಾ| ಪಿ. ಅನಂತಕೃಷ್ಣ ಭಟ್‌ ಅಭಿಪ್ರಾಯಪಟ್ಟರು.

Advertisement

ವಿಪ್ರವೇದಿಕೆ ಕೋಡಿಕಲ್‌ನಲ್ಲಿ ಆಯೋಜಿಸಲಾದ ಬ್ರಾಹ್ಮಣ ಮತ್ತು ಸಮಾಜ ಸೇವೆ ಎಂಬ ವಿಷಯದಲ್ಲಿ ಮಾರ್ಗದರ್ಶನ ನೀಡಿದರು. ಬ್ರಾಹ್ಮಣ ತನ್ನ ವ್ಯಕ್ತಿಗತ ಬದುಕಿನೊಂದಿಗೆ, ಸಮಗ್ರ ಸಮಾಜದ ಅಭ್ಯುದಯ ಬಯಸುವ, ಅಂತಹ ಪ್ರಗತಿಗೆ ಕಾರ್ಯೋನ್ಮುಖವಾಗುವುದು, ಬ್ರಾಹ್ಮಣರ ಕರ್ತ್ಯವ್ಯ ಕೂಡ ಹೌದು. ಭಾರತದ ವರ್ತಮಾನ, ಭವಿಷ್ಯ ದಲ್ಲಿಯೂ ಬ್ರಾಹ್ಮಣರು ಸಮಾಜದ ಅಭಿವೃದ್ಧಿಗೆ ನಿರಂತರ ಕ್ರಿಯಾಶೀಲರಾಗಬೇಕು, ಮಾದರಿ ವ್ಯಕ್ತಿಗಳಾಗಿ ಬಾಳಬೇಕು ಎಂದರು. ವಿಪ್ರವೇದಿಕೆಯ ಅಧ್ಯಕ್ಷ ಗಿರೀಶ್‌ ರಾವ್‌ ಸ್ವಾಗತಿಸಿದರು. ಖಜಾಂಚಿ ದುರ್ಗಾದಾಸ್‌ ಕೋಡಿಕಲ್‌ ವಂದಿಸಿದರು. ರಾಮಚಂದ್ರ ರಾವ್‌, ಟ್ರಸ್ಟಿಗಳಾದ ಜಯರಾಮ್‌ ಪದಕಣ್ಣಾಯ, ವಿದ್ಯಾ ಗಣೇಶ್‌ ರಾವ್‌, ಭರತಾಂಜಲಿಯ ಶ್ರೀಧರ ಹೊಳ್ಳ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next