Advertisement

ಬಿಜೆಪಿ ವತಿಯಿಂದ ಬದಿಯಡ್ಕದಲ್ಲಿ ಪಾಯಸ ವಿತರಣೆ

09:51 AM May 31, 2019 | keerthan |

ಬದಿಯಡ್ಕ: ಉತ್ತಮವಾದ ವ್ಯಕ್ತಿತ್ವ ಹೊಂದಿದ ಕಠಿಣ ಪರಿಶ್ರಮದ ವ್ಯಕ್ತಿಯು ಇಂದು ಮತ್ತೂಮ್ಮೆ ನಮ್ಮನ್ನು ಮುನ್ನಡೆಸಲಿದ್ದಾರೆ. ವಿರೋಧಪಕ್ಷಗಳ ನೇತಾರರ ಸುಳ್ಳು ಪ್ರಚಾರಗಳಿಗೆ ಕಿವಿಗೊಡದ ದೇಶದ ಜನತೆ ಪ್ರಧಾನ ಸೇವಕನಿಗೆ ರಾಜಪೀಠವನ್ನು ನೀಡಿದೆ. ವಿರೋಧಿಗಳ ನಿಂದನೆಗಳಿಗೆ ಬಂಡೆಕಲ್ಲಿನಂತೆ ನಿಂತಿರುವ ಆರ್‌ಎಸ್‌ಎಸ್‌ನ ನಿಷ್ಠಾವಂತ ದೇಶವನ್ನಾಳುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಚಾರ. ಈ ನಿಟ್ಟಿನಲ್ಲಿ ಸಿಹಿ ಹಂಚಿ ಸಂಭ್ರಮಿಸುತ್ತಿರುವುದು ಸಂತಸದ ವಿಚಾರವಾಗಿದೆ. ನರೇಂದ್ರ ಮೋದಿಯವರ ಮೂಲಕ ದೇಶವು ಮತ್ತೂಮ್ಮೆ ಪ್ರಜ್ವಲಿಸಲಿದೆ ಎಂದು ಬದಿಯಡ್ಕ ಗ್ರಾಮಪಂಚಾಯತ್‌ ಮಾಜಿ ಅಧ್ಯಕ್ಷ, ಹಿರಿಯರಾದ ಬಿ.ಸುಂದರ ಪ್ರಭು ಬದಿಯಡ್ಕ ಹೇಳಿದರು.

Advertisement

ನರೇಂದ್ರ ಮೋದಿಯವರು ಮತ್ತೂಮ್ಮೆ ಅಧಿಕಾರಕ್ಕೇರುತ್ತಿರುವ ಸಂದರ್ಭದಲ್ಲಿ ಬದಿಯಡ್ಕ ಪೇಟೆಯಲ್ಲಿ ನಡೆದ ಪಾಯಸ ವಿತರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಸರಗೋಡು ಮಂಡಲ ಅಧ್ಯಕ್ಷ ಎಂ.ಸುಧಾಮ ಗೋಸಾಡ ಈ ಸಂಧರ್ಭದಲ್ಲಿ ಮೋದಿ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡುತ್ತಾ ರಾಮಲಕ್ಷ್ಮಣರಂತೆ ಒಗ್ಗಟ್ಟಿನಿಂದ ದೇಶದ ಒಳಿತಿಗಾಗಿ ಹೋರಾಡಿ ವಿರೋಧಿಗಳನ್ನು ಮಣ್ಣು ಮುಕ್ಕಿಸಿದ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರು ನಮ್ಮ ಜನಪ್ರಿಯ ನಾಯಕರಾಗಿದ್ದಾರೆ. ಅವರ ಆಡಳಿತದಲ್ಲಿ ದೇಶವು ಇನ್ನಷ್ಟು ಪ್ರಗತಿಯನ್ನು ಕಾಣಲಿದೆ. ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಎಂದು ಎಲ್ಲರನ್ನೂ ಒಂದುಗೂಡಿಸುವ ಪ್ರಧಾನ ಸೇವಕ ನರೇಂದ್ರ ಮೋದಿಯವರು ವಿಶ್ವವಂದ್ಯರು ಎಂದರು.

ನೇತಾರರಾದ ವಿಶ್ವನಾಥ ಪ್ರಭು ಕರಿಂಬಿಲ, ಬಾಲಕೃಷ್ಣ ಶೆಟ್ಟಿ ಕಡಾರು, ಎಂ.ನಾರಾಯಣ ಭಟ್‌, ಅವಿನಾಶ್‌ ರೈ ಹಾಗೂ ನರೇಂದ್ರ ಮೋದಿ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಜೊತೆಗಿದ್ದು ಸಿಹಿ ಹಂಚಿ ಸಂಭ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next