Advertisement

ಪಿರಿಯಾಪಟ್ಟಣದಲ್ಲಿ ಪ್ರತ್ಯೇಕ ಅಪಘಾತ ; ಇಬ್ಬರು ಸಾವು

07:01 PM Dec 29, 2022 | Team Udayavani |

ಪಿರಿಯಾಪಟ್ಟಣ : ಬೈಕಿನಲ್ಲಿ ತೆರಳುತ್ತಿದ್ದ ದಂಪತಿಗಳಿಗೆ ಅಪರಿಚಿತ ವಾಹನ ಢಿಕ್ಕಿಹೊಡೆದ ಪರಿಣಾಮ ಪತ್ನಿ ಸಾವನಪ್ಪಿರುವ ಘಟನೆ ನಡೆದಿದೆ.

Advertisement

ಪಟ್ಟಣದ ಶಿವಣ್ಣ ಮತ್ತು ಶಾಂತಮ್ಮ ದಂಪತಿಗಳು ತಮ್ಮ ರಾಜಾಪುರದಲ್ಲಿ ಇರುವ ಜಮೀನಿನಲ್ಲಿ ಹಾಲು ಕರೆಯುವ ಸಲುವಾಗಿ ಗೋಣಿಕೊಪ್ಪಾ ರಸ್ತೆಯಲ್ಲಿ ತೆರಳುತ್ತಿದ್ದು ಮಹದೇಶ್ವರ ದೇವಾಲಯದ ತಿರುವಿನಲ್ಲಿ ಅಪರಚಿತ ವಾಹನ ಢಿಕ್ಕಿಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದಾರೆ.

ಗಾಯಗೊಂಡ ಇಬ್ಬರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ತೆರಳಲು ಆಂಬುಲೆನ್ಸ್ ಗೆ ಹತ್ತಿಸುವ ಸಂದರ್ಭದಲ್ಲಿ ಸಾವನಪ್ಪಿದ್ದು ಪತಿ ಶಿವಣ್ಣರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಗಿದೆ. ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಕೆ ಮುಂದುವರೆಸಲಾಗುತ್ತಿದೆ.

ಸರ್ಕಾರಿ ವಾಹನ ಬೈಕ್ ನಡುವೆ ಮುಖಾಮುಖಿ: ಸವಾರ ಸಾವು

ಪಿರಿಯಾಪಟ್ಟಣದ ಕೆಪಿಟಿಸಿಎಲ್ ಇಲಾಖೆಯ ವಾಹನ ಬೈಕ್‌ಗೆ ಢಿಕ್ಕಿಹೊಡೆದು ವ್ಯಕಿಯೋರ್ವ ಮೃತಪಟ್ಟಿರುವ ಘಟನೆ ನಡೆದಿದೆ.

Advertisement

ಪಿರಿಯಾಪಟ್ಟಣ ಟೌನ್‌ನ ಮೇದರ್ ಬ್ಲಾಕ್ ನ ಪುಟ್ಟಯ್ಯ ಎಂಬುವವರ ಮಗ ರಂಜಿತ್ (21) ಎಂಬಾತನೆ ಮೃತಪಟ್ಟಿರುವಾತ.ಈತ ಪಿರಿಯಾಪಟ್ಟಣ ಟೌನ್‌ನಿಂದ ಮಡಿಕೇರಿ ಮಾರ್ಗವಾಗಿ ತಮ್ಮ ಗಾಂಧಿನಗರ ಬಡವಾಣೆಗೆ ತೆರಳುತ್ತಿದ್ದು ಪಟ್ಟಣದ ಸರ್ಕಲ್ ಇನ್ಸ್‌ಪೆಕ್ಟರ್ ಕಚೇರಿಯ ಎದುರು ಹಿಂಬದಿಯಿಂದ ಬರುತ್ತಿದ್ದುಕೆಪಿಟಿಸಿಎಲ್ ಕಚೇರಿಯ ಟಿಟಿವಾಹನ ಡಿಕ್ಕಿಹೊಡೆದ ಪರಿಣಾಮ ತೀವ್ರ ಗಾಯಾಳುವಾಗಿದ್ದ ರಂಜಿತ್‌ನನ್ನು ಮೈಸೂರಿಗೆ ಆಸ್ಪತ್ರೆಗೆ ರವಾನಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ರಂಜಿತ್ ಮೃತಪಟ್ಟಿದ್ಧಾನೆ ಎಂದು ಪಿರಿಯಾಪಟ್ಟಣ ಪೊಲೀಸರು ತಿಳಿಸಿದ್ಧಾರೆ.

ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next