Advertisement

ಕಸ್ಟಡಿ ಪ್ರಶ್ನಿಸಿದ್ದ ಸೆಂಥಿಲ್‌ ಅರ್ಜಿ ವಜಾ

09:01 PM Jul 14, 2023 | Team Udayavani |

ಚೆನ್ನೈ: ಕೇಂದ್ರ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯ (ಇ.ಡಿ)ಕ್ಕೆ ಆರೋಪಕ್ಕೆ ಗುರಿಯಾದ ವ್ಯಕ್ತಿಯನ್ನು ವಶಕ್ಕೆ ಪಡೆಯಲು ಹಕ್ಕು ಇದೆ ಎಂದು ಮದ್ರಾಸ್‌ ಹೈಕೋರ್ಟ್‌ ಶುಕ್ರವಾರ ಅಭಿಪ್ರಾಯಪಟ್ಟಿದೆ. ಇದರಿಂದಾಗಿ ಇ.ಡಿ.ಬಂಧನದಲ್ಲಿ ಇರುವ ತಮಿಳುನಾಡು ಸಚಿವ ವಿ.ಸೆಂಥಿಲ್‌ ಬಾಲಾಜಿ ಅವರಿಗೆ ಭಾರೀ ಹಿನ್ನಡೆಯಾಗಿದೆ. ತನಿಖಾ ಸಂಸ್ಥೆಯ ವಶಕ್ಕೆ ಒಪ್ಪಿಸಿದ್ದನ್ನು ಪ್ರಶ್ನಿಸಿ ಮದ್ರಾಸ್‌ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

Advertisement

ನ್ಯಾ.ಸಿ.ವಿ.ಕಾರ್ತಿಕೇಯನ್‌ ನೇತೃತ್ವದ ನ್ಯಾಯಪೀಠ ವಿಚಾರಣೆ ನಡೆಸಿ “ತನಿಖಾ ಸಂಸ್ಥೆಗೆ ವಶಕ್ಕೆ ಪಡೆದುಕೊಳ್ಳುವ ಹಕ್ಕು ಇದೆ’ ಎಂದು ತೀರ್ಪು ನೀಡಿದ್ದಾರೆ. ಇದಕ್ಕಿಂತ ಮೊದಲು ವಿಚಾರಣೆ ನಡೆಸಿದ್ದ ನ್ಯಾ.ನಿಶಾ ಭಾನು ಮತ್ತು ನ್ಯಾ.ಡಿ.ಭರತ್‌ ಚಕ್ರವರ್ತಿ ಅವರನ್ನೊಳಗೊಂಡ ವಿಭಾಗೀಯ ಪೀಠ ಭಿನ್ನ ತೀರ್ಪು ನೀಡಿತ್ತು. ಹೀಗಾಗಿ, ನ್ಯಾ.ಕಾರ್ತಿಕೇಯನ್‌ ನೇತೃತ್ವದ ನ್ಯಾಯಪೀಠಕ್ಕೆ ಪ್ರಕರಣ ವರ್ಗಾವಣೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next