Advertisement

RSS: ಸಂಘದ ಹಿರಿಯ ಪ್ರಚಾರಕ ಆರ್‌.ಹರಿ ನಿಧನ

08:25 PM Oct 29, 2023 | Team Udayavani |

ಕೊಚ್ಚಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕ, ಮಾಜಿ ಬೌದ್ಧಿಕ್‌ ಪ್ರಮುಖ್‌ ಆರ್‌.ಹರಿ ನಿಧನ ಹೊಂದಿದ್ದಾರೆ. ವಯೋಸಹಜ ಕಾರಣಗಳಿಂದ ಮೃತಪಟ್ಟಿದ್ದಾರೆಂದು ಆರ್‌ಎಸ್‌ಎಸ್‌ ತಿಳಿಸಿದೆ. 93 ವರ್ಷದ ಹರಿ ಅವರನ್ನು ಹರಿ ಎಟ್ಟನ್‌ ಎಂದೇ ಕರೆಯುತ್ತಿದ್ದರು. ಎರ್ನಾಕುಲಂನಲ್ಲಿ ಹುಟ್ಟಿದ ಅವರು ಸಂಘದಲ್ಲಿ ಪ್ರಮುಖ ಸ್ಥಾನಕ್ಕೇರಿದ ಕೇರಳದ ಮೊದಲ ಪ್ರಚಾರಕ.

Advertisement

ಕುರುಕ್ಷೇತ್ರ ಎಂಬ ಮಲಯಾಳಂ ನಿಯತಕಾಲಿಕೆಯ ಹೊಣೆ ಹೊತ್ತಿದ್ದರು. ಏಷ್ಯಾ ಮತ್ತು ಆಸ್ಟ್ರೇಲಿಯದಲ್ಲಿ ಹಿಂದೂ ಸ್ವಯಂಸೇವಕ ಸಂಘದ ಬೆಳವಣಿಗೆಗೆ ಶ್ರಮಿಸಿದ್ದರು. ಮಲಯಾಳಂನಲ್ಲಿ ಒಟ್ಟು 43 ಪುಸ್ತಕ ಬರೆದಿದ್ದಾರೆ, ಹಿಂದಿಯಲ್ಲಿ 11, ಇಂಗ್ಲಿಷ್‌ನಲ್ಲಿ 2 ಪುಸ್ತಕಗಳನ್ನು ರಚಿಸಿದ್ದಾರೆ. ಇವರ ನಿಧನಕ್ಕೆ ಕೇಂದ್ರ ಗೃಹಸಚಿವ ಅಮಿತ್‌ ಶಾ ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next