Advertisement

ಹಿರಿಯ ಕಾಂಗ್ರೆಸ್‌ ನಾಯಕರಿಂದಲೇ ಸಮಸ್ಯೆ: ರಾಹುಲ್‌ಗೆ ಕಾರ್ಯಕರ್ತರು

11:20 AM Oct 12, 2018 | udayavani editorial |

ಹೊಸದಿಲ್ಲಿ : ”ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರು ತುಂಬ ಜಿಗುಟು ಮತ್ತು ಸಂಪರ್ಕಕ್ಕೇ ಸಿಗದವರಾಗಿದ್ದಾರೆ; ಅಲ್ಲದೇ ಅವರು ನಮ್ಮ ಯಾವ ಮಾತುಗಳನ್ನು ಆಲಿಸುವುದಿಲ್ಲ, ಭೇಟಿಯಾಗಲೂ ಬಯಸುವುದಿಲ್ಲ; ಮೇಲಾಗಿ ಪಕ್ಷದೊಳಗೆ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ” ಎಂದು ಪಕ್ಷದ ಕಾರ್ಯಕರ್ತರು ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ದೂರು ನೀಡಿದ್ದಾರೆ. 

Advertisement

ರಾಹುಲ್‌ ಗಾಂಧಿ ಅವರು ಪಕ್ಷ ಸಂಘಟಿಸುವ ಪ್ರಯತ್ನದ ಭಾಗವಾಗಿ ಪಕ್ಷದ ಕಾರ್ಯಕರ್ತರು ಮತ್ತು ಜಿಲ್ಲಾ ಮುಖ್ಯಸ್ಥರೊಂದಿಗೆ ಫೋನಿನಲ್ಲಿ ಸಂವಾದಿಸಿ ತಳ ಮಟ್ಟದ ಪಕ್ಷದ ಸ್ಥಿತಿಗತಿ ಕುರಿತ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ. 

ಪಶ್ಚಿಮ ಬಂಗಾಲದ ಜಲಪಾಯ್‌ಗಾರಿ ಜಿಲ್ಲೆಯ ಕಾಂಗ್ರೆಸ್‌ ಸದಸ್ಯರೋರ್ವರು, “ಕಾಂಗ್ರೆಸ್‌ನ ಹಿರಿಯ ನಾಯಕರು ನಮ್ಮನ್ನು ಭೇಟಿಯಾಗುವುದರಲ್ಲಿ ಯಾವುದೇ ಆಸಕ್ತಿ ತೋರುತ್ತಿಲ್ಲ; ಇದರಿಂದಾಗಿ ಪಕ್ಷದ ಅಜೆಂಡಾಗೆ ಧಕ್ಕೆ ಯಾಗುತ್ತಿದೆ’ ಎಂದು ದೂರಿದರು. 

“ನೀವು ಪಶ್ಚಿಮ ಬಂಗಾಲದಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೇ ನೇರವಾಗ ಇಲ್ಲಿಂದಲೇ ಲೋಕಸಭೆಗೆ ಸ್ಪರ್ಧಿಸಬೇಕು; ಸಿಎಂ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್‌ ನಾಯಕರ ಬಗ್ಗೆ ತುಂಬ ಸಿಟ್ಟು ಸಿಡುಕು ತೋರಿಸುತ್ತಿದ್ದಾರೆ ಎಂದವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next