Advertisement

ಸಾವರ್ಕರ್ ಗೆ ಭಾರತ ರತ್ನ ಕೊಡಲು ವಿರೋಧಿಸುವವರನ್ನು ಅಂಡಮಾನ್ ಜೈಲಿಗೆ ಹಾಕಬೇಕು: ರಾವತ್

10:02 AM Jan 19, 2020 | Nagendra Trasi |

ಮುಂಬೈ: ವೀರ ಸಾವರ್ಕರ್ ಅವರಿಗೆ ಭಾರತ ರತ್ನ ಕೊಡಲು ಯಾರು ವಿರೋಧಿಸುತ್ತಾರೋ ಅವರನ್ನು ಸಾವರ್ಕರ್ ಶಿಕ್ಷೆ ಅನುಭವಿಸಿದ್ದ ಅಂಡಮಾನ್ ಜೈಲಿಗೆ ಹಾಕಬೇಕು ಶಿವಸೇನಾ ಮುಖಂಡ ಸಂಜಯ್ ರಾವತ್ ಶನಿವಾರ ವಾಗ್ದಾಳಿ ನಡೆಸಿದ್ದಾರೆ.

Advertisement

ಸಾವರ್ಕರ್ ಗೆ ಭಾರತ ರತ್ನ ನೀಡಲು ಯಾರು ವಿರೋಧಿಸುತ್ತಿದ್ದಾರೋ ಅಂತಹವರನ್ನು ಎರಡು ದಿನಗಳ ಕಾಲ ಅಂಡಮಾನ್ ಸೆಲ್ಯೂಲರ್ ಜೈಲಿಗೆ ಹಾಕಬೇಕು. ಆಗ ಸಾವರ್ಕರ್ ಅವರು ದೇಶಕ್ಕಾಗಿ ಮಾಡಿದ ತ್ಯಾಗ ಮತ್ತು ಕೊಡುಗೆ ಏನು ಎಂಬುದರ ಅರಿವಾಗಲಿದೆ ಎಂದು ತಿರುಗೇಟು ನೀಡಿದ್ದಾರೆ ಎಂದು ವರದಿ ತಿಳಿಸಿದೆ.

ನಾವು ಯಾವಾಗಲೂ ವೀರ ಸಾವರ್ಕರ್ ಗೆ ಗೌರವ ಕೊಡಬೇಕು ಎಂದು ಬೇಡಿಕೆ ಇಡುತ್ತಲೇ ಬಂದಿದ್ದೇವೆ. ಆದರೆ ಕೆಲವರು ಭಾರತ ರತ್ನ ನೀಡಲು ವಿರೋಧಿಸುತ್ತಿದ್ದಾರೆ ಎಂದು ರಾವತ್ ಹೇಳಿದರು.

ಕಳೆದ ವಾರ ಸಂಜಯ್ ರಾವತ್ ಅವರು ಮಾಜಿ ಪ್ರಧಾನಿ ಇಂದಿರಾಗಾಂಧಿ ಮುಂಬೈಗೆ ಭೇಟಿ ನೀಡಿದಾಗ ಗ್ಯಾಂಗ್ ಸ್ಟರ್ ಕರೀಂಲಾಲಾನನ್ನು ಭೇಟಿಯಾಗಿದ್ದರು ಎಂದು ಹೇಳಿಕೆ ನೀಡಿದ್ದು, ಇದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಬಳಿಕ ರಾವತ್ ತಮ್ಮ ಹೇಳಿಕೆಯನ್ನು ವಾಪಸ್ ಪಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next