Advertisement

ಗೆಲ್ಲಬೇಕಾದರೆ ಈ ತಕ್ಷಣ ರಾಹುಲ್ ದ್ರಾವಿಡ್‌ರನ್ನು ಆಸ್ಟ್ರೇಲಿಯಕ್ಕೆ ಕಳಿಸಿಕೊಡಿ!

09:53 AM Dec 21, 2020 | keerthan |

ನವದೆಹಲಿ: ಅಡಿಲೇಡ್‌ನ‌ಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರತ ಹೀನಾಯ ಸೋಲುಕಂಡ ಹಿನ್ನೆಲೆಯಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯ ಸಲಹೆ ನೀಡಲು ಆರಂಭಿಸಿದ್ದಾರೆ. ಈ ಪೈಕಿ ಮಾಜಿ ಆಟಗಾರ ದಿಲೀಪ್‌ ವೆಂಗ್‌ಸರ್ಕಾರ್‌, ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಮಾರ್ಗದರ್ಶನ ನೀಡಲು ರಾಹುಲ್‌ ದ್ರಾವಿಡ್‌ ತಕ್ಷಣ ಆಸ್ಟ್ರೇಲಿಯಕ್ಕೆ ತೆರಳಬೇಕು ಎಂದು ಒತ್ತಾಯಿಸಿದ್ದಾರೆ.

Advertisement

ಅಡಿಲೇಡ್‌ ಟೆಸ್ಟ್‌ನಲ್ಲಿ 36 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ಭಾರತದ ಟೆಸ್ಟ್‌ ಇತಿಹಾಸದಲ್ಲಿ ಅತ್ಯಂತಕನಿಷ್ಠ ಮೊತ್ತ ದಾಖಲಿಸಿದ ಅವಮಾನಕ್ಕೆ ತುತ್ತಾಗಿದೆ. ಹೀಗಾಗಿ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿಗೆ ಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕ ದಿಲೀಪ್‌ ವೆಂಗ್‌ ಸರ್ಕಾರ್‌, ಈ ಸಲಹೆ ನೀಡಿದ್ದಾರೆ.

ಇದನ್ನೂ ಓದಿ:ಪಾಕ್ ವಿರುದ್ಧದ ಟಿ20 ಸರಣಿ ವಶಪಡಿಸಿಕೊಂಡ ನ್ಯೂಜಿಲ್ಯಾಂಡ್‌

ಭಾರತ ತಂಡಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ಬಿಸಿಸಿಐ, ರಾಹುಲ್‌ ದ್ರಾವಿಡ್‌ ಅವರನ್ನು ತತ್‌ಕ್ಷಣವೇ ಆಸ್ಟ್ರೇಲಿಯಗೆ ಕಳುಹಿಸಬೇಕು. ಆಸ್ಟ್ರೇಲಿಯದ ಪರಿಸ್ಥಿತಿಯಲ್ಲಿ ಚೆಂಡು ಹೇಗೆ ವರ್ತಿಸುತ್ತದೆ ಎಂಬುದಕ್ಕೆ ರಾಹುಲ್‌ ದ್ರಾವಿಡ್‌ ಅವರಿಗಿಂತ ಉತ್ತಮವಾಗಿ ಸಲಹೆ ನೀಡಲು ಬೇರೊಬ್ಬರಿಂದ ಸಾಧ್ಯವಿಲ್ಲ. ಆದ್ದರಿಂದ ದ್ರಾವಿಡ್‌ ಅವರ ಉಪಸ್ಥಿತಿ ತಂಡಕ್ಕೆ ದೊಡ್ಡ ಬಲ ನೀಡಲಿದೆ ಎಂದು ವೆಂಗ್‌ಸರ್ಕಾರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next