Advertisement

“ಟೆರರಿಸ್ಟ್‌ ಇನ್‌ ಫ್ಲೈಟ್‌’ಸಂದೇಶ ಕಳುಹಿಸಿ ಫ‌ಜೀತಿ

06:00 AM Nov 27, 2018 | Team Udayavani |

ಹೊಸದಿಲ್ಲಿ: ಕೋಲ್ಕತ್ತಾದಿಂದ ಮುಂಬೈಗೆ ಹೊರಟಿದ್ದ ಜೆಟ್‌ ಏರ್‌ವೆಸ್‌ನ ಪ್ರಯಾಣಿಕನೊಬ್ಬನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಆತ “ಟೆರರಿಸ್ಟ್‌ ಇನ್‌ ಫ್ಲೈಟ್‌’ (ವಿಮಾನದಲ್ಲಿ ಭಯೋತ್ಪಾದಕನಿದ್ದಾನೆ) ಎಂದು ಸ್ನೇಹಿತರಿಗೆ ಮೊಬೈಲ್‌ ಸಂದೇಶ ಕಳುಹಿಸಿದ್ದೇ ಇದಕ್ಕೆ ಕಾರಣ. 

Advertisement

ಪ್ರಯಾಣಿಕ ಯೋಗ್ವೇದಾಂತ್‌ ಪೊದ್ದಾರ್‌(21) ವಿಮಾನದಲ್ಲಿ ಕುಳಿತು, ಸ್ನ್ಯಾಪ್‌ಚಾಟ್‌ನಲ್ಲಿ “ಫ್ಲೈಟ್‌ನಲ್ಲಿ ಭಯೋತ್ಪಾದಕನಿದ್ದಾನೆ. ಆತ ಮಹಿಳೆಯರ ಹೃದಯ ಸ್ಫೋಟಿಸಲಿದ್ದಾನೆ’ ಎಂದು ಜೋಕ್‌ ಮಾಡಿ, ಸಂದೇಶ ಕಳುಹಿಸಿದ್ದ. ಅದು ಆತನ ಸಹಪ್ರಯಾಣಿಕರೊಬ್ಬರ ಕಣ್ಣಿಗೆ ಬಿದ್ದು, ಅವರು ವಿಮಾನ ಸಿಬ್ಬಂದಿಗೆ ವಿಷಯ ಮುಟ್ಟಿಸಿದರು. ಕೂಡಲೇ ಸಿಐಎಸ್‌ಎಫ್ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದರು. ತನ್ನ ಸ್ನೇಹಿತರೊಂದಿಗೆ ತಮಾಷೆ ಮಾಡಲು ಹಾಗೆ ಸಂದೇಶ ಕಳುಹಿಸಿದ್ದಾಗಿ ಆತ ಹೇಳಿದ್ದು, ನಿರ್ದೋಷಿ ಎಂದು ತಿಳಿಯುತ್ತಲೇ ಮತ್ತೂಂದು ವಿಮಾನದಲ್ಲಿ ಆತನನ್ನು ಮುಂಬೈಗೆ ಕಳುಹಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next