Advertisement

ಕಂಬಳಕ್ಕೆ ಸೆನ್ಸರ್‌, ಓಟಗಾರರಿಗೆ ವಿಮೆ: ಡಾ|ಎಂ.ಎನ್‌.ಆರ್‌.

11:11 AM Feb 27, 2020 | sudhir |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ (ಎಸ್‌ಸಿಡಿಸಿಸಿ) ಬ್ಯಾಂಕ್‌ ವತಿಯಿಂದ ಕಂಬಳದಲ್ಲಿ ಹೆಚ್ಚು ನಿಖರ ಮತ್ತು ಶೀಘ್ರ ಫ‌ಲಿತಾಂಶಕ್ಕೆ ಅನುಕೂಲವಾಗುವ ಸೆನ್ಸರನ್ನು ಅಳವಡಿಸಲಾಗುವುದು ಹಾಗೂ ಕಂಬಳ ಓಟಗಾರರಿಗೆ ವಿಮೆ ಸೌಲಭ್ಯ ಒದಗಿಸಲಾಗುವುದು ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಹೇಳಿದ್ದಾರೆ.

Advertisement

ಮಂಗಳವಾರ ಎಸ್‌ಸಿಡಿಸಿಸಿ ಬ್ಯಾಂಕ್‌ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಅವರು ಕಂಬಳದಲ್ಲಿ ದಾಖಲೆಗಳನ್ನು ಮಾಡಿರುವ, ಹಲವು ವರ್ಷಗಳಿಂದ ಕೋಣಗಳನ್ನು ಓಡಿಸು ತ್ತಿರುವ ಓಟಗಾರರನ್ನು ಸಮ್ಮಾನಿಸಿ ಮಾತನಾಡಿದರು.

ಓಟಗಾರರಿಂದಾಗಿ ಕಂಬಳ ಇಂದು ಅಂತಾರಾಷ್ಟ್ರೀಯವಾಗಿ ಗುರುತಿ ಸಲ್ಪಡುತ್ತಿದೆ. ಹೊಸ ಮಾದರಿಯ ಸೆನ್ಸರ್‌ ಅಳವಡಿಸಲು 4 ಲ.ರೂ. ತಗಲಲಿದ್ದು ಈ ಬಗ್ಗೆ ಜಿಲ್ಲಾ ಕಂಬಳ ಸಮಿತಿಯವರು ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ಮನವಿ ಸಲ್ಲಿಸಿದ್ದರು. ಸೆನ್ಸರ್‌ ಅಳವಡಿಸಿದರೆ ನಿಖರ ಫ‌ಲಿತಾಂಶ ದೊರೆಯುತ್ತದೆ. ಸಮಯ ಕೂಡ ಉಳಿಯುತ್ತದೆ. ಇದರಿಂದಾಗಿ ಈ ಮನವಿಯನ್ನು ಬ್ಯಾಂಕ್‌ ಪುರಸ್ಕರಿಸುತ್ತದೆ ಎಂದರು.

ದಾಖಲೆ ನಿರ್ಮಿಸಿರುವ ಅಶ್ವತ್ಥಪುರ ಶ್ರೀನಿವಾಸ ಗೌಡ, ಬಜಗೋಳಿಯ ನಿಶಾಂತ ಶೆಟ್ಟಿ ಅವರಿಗೆ ತಲಾ 25,000 ರೂ. ನೀಡಿ ಸಮ್ಮಾನಿಸಲಾಯಿತು. ಈ ಹಿಂದೆ ದಾಖಲೆ ನಿರ್ಮಿಸಿರುವ ಓಟಗಾರರಾದ ಇರ್ವತ್ತೂರು ಆನಂದ, ಹಕ್ಕೇರಿ ಸುರೇಶ ಶೆಟ್ಟಿ, ಅಳದಂಗಡಿ ರವಿ ಹಾಗೂ ಪಣಪೀಲು ಪ್ರವೀಣ್‌ ಕೋಟ್ಯಾನ್‌ ಅವರಿಗೆ ತಲಾ 10,000 ರೂ. ನೀಡಿ ಗೌರವಿಸಲಾಯಿತು. ಹಿರಿಯ ಓಟಗಾರರಾದ ಪೇಜಾವರ ಭಾಸ್ಕರ್‌, ವೀರಕಂಬ ಜಯಂತ ಶೆಟ್ಟಿ, ನಕ್ರೆ ಜಯಕರ ಮಡಿವಾಳ, ಪಲಿಮಾರು ದೇವೇಂದ್ರ ಕೋಟ್ಯಾನ್‌, ಪ್ರವೀಣ್‌ ಶೆಟ್ಟಿ ಸಾಣೂರು, ಈದು ಅಜಿತ್‌ ಕುಮಾರ್‌, ವಿಜಯ ಕುಮಾರ್‌ ಕಂಗಿನಮನೆ, ಮಾರ್ನಾಡು ರಾಜೇಶ ಅವರನ್ನು ಅಭಿನಂದಿಸಲಾಯಿತು. ಅಲ್ಲದೆ ಯೋಗ ದಲ್ಲಿ ಗಿನ್ನೆಸ್‌ ದಾಖಲೆ ಮಾಡಿದ ಬಾಲ ಸಾಧಕಿ ತನುಶ್ರೀ ಪಿತ್ರೋಡಿ ಅವರನ್ನು ಸಮ್ಮಾನಿಸಲಾಯಿತು.
ನಿರ್ದೇಶಕರಾದ ಡಾ| ದೇವಿ ಪ್ರಸಾದ್‌ ಶೆಟ್ಟಿ ಬೆಳಪು, ಭಾಸ್ಕರ ಕೋಟ್ಯಾನ್‌, ಶಶಿಕುಮಾರ್‌ ರೈ ಬಾಳ್ಯಟ್ಟು , ಪ್ರಧಾನ ವ್ಯವಸ್ಥಾಪಕ ಗೋಪಾಲಕೃಷ್ಣ, ವಿಜಯ ಕುಮಾರ್‌ ಕಂಜಿಲಮನೆ, ಗುಣಪಾಲ ಕಡಂಬ, ಪ್ರಸಾದ್‌ ಕೌಶಲ್‌ ಶೆಟ್ಟಿ, ಸದಾಶಿವ ಉಳ್ಳಾಲ್‌, ಕೊಂಡೆಟ್ಟು ಸುಕುಮಾರ ಶೆಟ್ಟಿ, ಶ್ರೀಧರ್‌, ಚಿತ್ತರಂಜನ್‌ ಭಂಡಾರಿ, ಅರುಣ್‌ ಶೆಟ್ಟಿ, ಜಯಪ್ರಕಾಶ್‌ ಉಪಸ್ಥಿತರಿದ್ದರು.

100 ಮಂದಿಗೆ ವಿಮೆ
ಪ್ರಸ್ತುತ ಒಂದು ಕಂಬಳಕ್ಕೆ ಕಂಬಳ ಆಯೋಜಿಸುವವರು ಸೆನ್ಸರ್‌ಗೆ
30,000 ರೂ. ಖರ್ಚು ಮಾಡುತ್ತಿದ್ದಾರೆ. ನಾವು ಸೆನ್ಸರ್‌ಗೆ 18,000 ರೂ. (ಸರ್ವೀಸ್‌ ಚಾರ್ಜ್‌) ಮಾತ್ರ ಪಡೆಯುತ್ತೇವೆ. ಅಲ್ಲದೆ 100 ಮಂದಿ ಓಟಗಾರರಿಗೆ ವಿಮಾ ಸೌಲಭ್ಯವನ್ನು ಒದಗಿಸಿಕೊಡಲಾಗುವುದು ಎಂದು ರಾಜೇಂದ್ರ ಕುಮಾರ್‌ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next