Advertisement

ಮನೆ ಮನೆಗೆ ಮದ್ಯ ಮಾರಾಟ: ಆಕ್ರೋಶದ ಬೆನ್ನಲ್ಲೇ ಉಲ್ಟಾ ಹೊಡೆದ ಅಬಕಾರಿ ಸಚಿವ

10:07 AM Sep 06, 2019 | keerthan |

ಬೆಂಗಳೂರು: ಕುಡಿದು ವಾಹನ ಚಲಾಯಿಸುವುದನ್ನು ತಪ್ಪಿಸಲು ಮನೆ ಬಾಗಿಲಿಗೆ ಮದ್ಯ ಸರಬರಾಜು ಮಾಡುವ ಯೋಜನೆಯ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಬುಧವಾರ ಹೇಳಿಕೆ ನೀಡಿದ್ದ ಅಬಕಾರಿ ಸಚಿವ ಎಚ್.‌ ನಾಗೇಶ್‌ ಇಂದು ಉಲ್ಟಾ ಹೊಡೆದಿದ್ದಾರೆ.

Advertisement

ಮನೆಗಳಿಗೆ ಮದ್ಯ ಪೊರೈಕೆ ಮಾಡಿದರೆ ಸಂಸಾರಗಳು ಹಾಳಾಗುತ್ತವೆ. ಅದಕ್ಕೆ ನಾನು ಬಿಡುವುದಿಲ್ಲ. ಅಂತಹ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಅಬಕಾರಿ ಸಚಿವರು ಇಂದು ಸ್ಪಷ್ಟನೆ ನೀಡಿದರು.

ನಾಗೇಶ್‌ ಅವರ ʼಮದ್ಯ ಪೂರೈಕೆʼ ಹೇಳಿಕೆಗೆ ರಾಜ್ಯಾದಾಧ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಆರ್ ಎಸ್ ಎಸ್ ಮತ್ತು ಬಿಜೆಪಿ ನಾಯಕರು ಕೂಡಾ ನಾಗೇಶ್‌ ಅವರನ್ನು ತರಾಟೆಗೆ ತೆಗದುಕೊಂಡ ತುರ್ತು ಪತ್ರಿಕಾಗೋಷ್ಠಿ ಕರೆದು ಸ್ಪಷ್ಟನೆ ನೀಡಿದರು.

ನನ್ನ ಹೇಳಿಕೆಯಿಂದ ಹೆಣ್ಣು ಮಕ್ಕಳಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದ ಸಚಿವರು, ತಾಂಡಗಳಲ್ಲಿ ಮೊಬೈಲ್ ಕ್ಯಾಂಟೀನ್ ಮೂಲಕ ಮದ್ಯ ಪೂರೈಕೆ ಪ್ರಸ್ತಾವನೆಯೂ ಇಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next