Advertisement

ಐದು ವರ್ಷಗಳಲ್ಲಿ ಕಲ್ಲಿದ್ದಲು ಉತ್ಪಾದನೆಯಲ್ಲಿ ಸ್ವಾವಲಂಬನೆ: ಜೋಶಿ

10:08 AM Dec 16, 2019 | Team Udayavani |

ರಾಯಚೂರು: ಮುಂದಿನ ಐದು ವರ್ಷಗಳಲ್ಲಿ ಕಲ್ಲಿದ್ದಲು ಆಮದು ಸಂಪೂರ್ಣ ನಿಲ್ಲಿಸಿ ಸ್ವಾವಲಂಬನೆ ಸಾ ಧಿಸಲಾಗುವುದು ಎಂದು ಕೇಂದ್ರ ಗಣಿ ಸಚಿವ ಪ್ರಹ್ಲಾದ್‌ ಜೋಶಿ ತಿಳಿಸಿದರು.

Advertisement

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅಕ್ಟೋಬರ್‌, ನವೆಂಬರ್‌ವರೆಗೂ ಭಾರೀ ಮಳೆ ಬಂದ ಕಾರಣ ಸಾಕಷ್ಟು ಅಡೆತಡೆ ಮಧ್ಯೆಯೂ ದೊಡ್ಡ ಪ್ರಮಾಣದಲ್ಲಿ ಕಲ್ಲಿದ್ದಲು ಉತ್ಪಾದನೆ ಮಾಡಲಾಗಿದೆ. ಪ್ರತಿ ದಿನ ಎರಡು ಸಾವಿರ ಟನ್‌ ಕಲ್ಲಿದ್ದಲು ಉತ್ಪಾದಿಸಲಾಗುತ್ತಿದ್ದು, ಎಲ್ಲಿಯೂ ಕೊರತೆ ಕಂಡು ಬಂದಿಲ್ಲ ಎಂದರು.

ರಾಜ್ಯಕ್ಕೆ ಕಲ್ಲಿದ್ದಲು ಪೂರೈಸಲು ಖಾಯಂ ಸಂಪರ್ಕ ಕಲ್ಪಿಸುವ ಬದಲು ಅತ್ಯಂತ ಸಮೀಪದ ಕಲ್ಲಿದ್ದಲು ಗಣಿಯನ್ನೇ ನೀಡಲಾಗಿದೆ. ಆದರೆ ಅದಕ್ಕೆ ಸಂಬಂ ಧಿಸಿದ ತಕರಾರು ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿದ್ದು, ಶೀಘ್ರದಲ್ಲಿಯೇ ಅದನ್ನು ಇತ್ಯರ್ಥಗೊಳಿಸಲಾಗುವುದು. ಅಲ್ಲಿಯವರೆಗೆ ಕಲ್ಲಿದ್ದಲು ಪೂರೈಕೆಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next