Advertisement

Crime: ಎಂಡಿಎಂಎ, ಗಾಂಜಾ ಸಹಿತ ಸೆರೆ

11:25 PM Sep 08, 2023 | Team Udayavani |

ಕಾಸರಗೋಡು: ಅಣಂಗೂರಿನಿಂದ 21 ಗ್ರಾಂ ಎಂಡಿಎಂಎ ಮತ್ತು 7.374 ಗ್ರಾಂ ಗಾಂಜಾ ವಶಪಡಿಸಿಕೊಂಡ ಕಾಸರಗೋಡು ಅಬಕಾರಿ ಸ್ಪೆಷಲ್‌ ಸ್ಕ್ವಾಡ್‌, ಈ ಸಂಬಂಧ ಅಣಂಗೂರು ಸುಲ್ತಾನ್‌ ನಗರದ ಅಬ್ದುಲ್‌ ಖಾದರ್‌ (26)ನನ್ನು ಬಂಧಿಸಿದೆ.

Advertisement

ರೈಲು ಢಿಕ್ಕಿ ಹೊಡೆದು ಮಹಿಳೆ ಸಾವು
ಕಾಸರಗೋಡು: ಚಿತ್ತಾರಿ ಶಾಲೆ ಸಮೀಪ ರೈಲು ಢಿಕ್ಕಿ ಹೊಡೆದು ಚಿತ್ತಾರಿ ನಾಯಕರ ವಳಪ್ಪಿಲ್‌ ಪ್ರಶಾಂತ್‌ ಅವರ ಪತ್ನಿ ವಿದ್ಯಾಕುಮಾರಿ (36) ಮೃತಪಟ್ಟಿದ್ದಾರೆ.

ಅಡಿಕೆ ಕಳವು: ಇನ್ನೋರ್ವನ ಬಂಧನ
ಮಂಜೇಶ್ವರ: ವರ್ಕಾಡಿ ನಲ್ಲೆಂಗಿಪದವಿನ ಸಾಜಿದ್‌ ಕಂಪೌಂಡ್‌ನ‌ ರೆಹ್ಮಾನ್‌ ಸಹೀಂ ಅವರ ಮನೆಯಿಂದ ಅಡಿಕೆ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಬಡಾಜೆ ಕಾಜೂರು ನಿವಾಸಿ ಅಬ್ದುಲ್‌ ನೌಶಾದ್‌(20)ನನ್ನು ಪೊಲೀಸರು ಬಂಧಿಸಿದ್ದಾರೆ. ಒಟ್ಟು ಮೂವರನ್ನು ಈವರೆಗೆ ಬಂಧಿಸಲಾಗಿದೆ.

ಸಾಮಗ್ರಿ ಕಳವು: ಮೂವರ ಬಂಧನ
ಬದಿಯಡ್ಕ: ಕಂದಲ್‌-ಮುಂಡಿತ್ತಡ್ಕ ರಸ್ತೆ ನಿರ್ಮಾಣಕ್ಕಾಗಿ ತಂದಿರಿಸಿದ್ದ ಉಪಕರಣಗಳು ಹಾಗೂ ಸಾಮಗ್ರಿಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಾಪಾಲಿಪೊನದ ನಿಸಾದ್‌(48), ಮೇಲ್ಪರಂಬ ಕಳನಾಡಿನ ಇರ್ಫಾನ್‌(36) ಮತ್ತು ಚೆರ್ಕಳ ಕೆಕೆ ಪುರದ ಸುಂದರ (48) ನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next