Advertisement

ಸೀತಾನದಿ ಕೈಕಂಬ: ರಸ್ತೆಯಲ್ಲಿ ಹೊಂಡ, ಅಪಾಯಕ್ಕೆ ಅಹ್ವಾನ

06:15 AM May 25, 2018 | Team Udayavani |

ಹೆಬ್ರಿ: ಹೆಬ್ರಿ ಆಗುಂಬೆ ಮುಖ್ಯ ರಸ್ತೆ ಸೀತಾನದಿ ಕೈಕಂಬ ಸರ್ಕಲ್‌ ಬಳಿ ರಸ್ತೆಯಲ್ಲಿ ಬೃಹತ್‌ ಗಾತ್ರದ ಹೊಂಡ ಉಂಟಾಗಿದ್ದು ಇದು ಅಪಾಯಕ್ಕೆ ಆಹ್ವಾನ ನೀಡಿದಂತಿದೆ.

Advertisement

ಕಳೆದ 6 ತಿಂಗಳ ಹಿಂದೆ ರಸ್ತೆ ಬದಿಯ ಮೋರಿಯೊಂದು ಕುಸಿದ ಪರಿಣಾಮ ಈ ಸಮಸ್ಯೆ ಉಂಟಾಗಿದ್ದು  ಹಲವು ಅಪಘಾತ ಸಂಭವಿಸಿದೆ. ಈ ಸಮಸ್ಯೆ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ತಿಳಿಸಿದರೂ  ಯಾವುದೇ ಪ್ರಯೋಜನವಾಗಿಲ್ಲ. ಇದು  ಉಡುಪಿ- ಶಿವಮೊಗ್ಗ ಸಂಪರ್ಕಿಸುವ ರಾಜ್ಯ ಹೆದ್ದಾರಿಯಾಗಿದ್ದು,  ಈ ಮಾರ್ಗದಲ್ಲಿ ಮಿನಿಬಸ್‌  ಸೇರಿದಂತೆ ವಾಹನ ದಟ್ಟಣೆ ಹೆಚ್ಚಾಗಿದೆ. ಸಮಸ್ಯೆಯಿಂದಾಗಿ ಬೈಕ್‌ ಸವಾರರು,  ಪಾದಚಾರಿಗಳು ನಡೆದು ಹೋಗುವುದು ಕಷ್ಟಕರವಾಗಿದೆ.

ಇಲ್ಲಿಯ ಸಮಸ್ಯೆ ಕುರಿತು ಸ್ಥ§ಳೀಯರು ಬೇಸತ್ತು ಹೆಬ್ರಿ ಪೊಲೀಸ್‌ ಠಾಣೆಯ ಗಮನಕ್ಕೆ ತಂದಾಗ ಇಲಾಖೆ ಬ್ಯಾರಿಕೇಡ್‌ ಇಡುವುದರ ಮೂಲಕ ರಸ್ತೆಯಲ್ಲಿರುವ ಹೊಂಡದ ಬಗ್ಗೆ  ಜನರಲ್ಲಿ  ಜಾಗೃತಿ ಮೂಡಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next