Advertisement

ಹೃಷಿಕೇಶದ ಗುಹೆಯಲ್ಲಿ ವಾಸಿಸುವ ಸಾಧುವಿನಿಂದ ಶ್ರೀ ರಾಮ ಮಂದಿರಕ್ಕೆ 1 ಕೋಟಿ ರೂ. ದೇಣಿಗೆ

09:23 PM Jan 30, 2021 | sudhir |

ಹರಿದ್ವಾರ: ಹೃಷಿಕೇಶದ ಗುಹೆಯಲ್ಲಿ ವಾಸಿಸುವ 83 ವರ್ಷದ ಸಾಧುವೊಬ್ಬರು ಅಯೋಧ್ಯೆ ಶ್ರೀರಾಮಮಂದಿರ ನಿರ್ಮಾಣಕ್ಕೆ ಬರೋಬ್ಬರಿ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಸ್ವಾಮಿ ಶಂಕರ್‌ ದಾಸ್‌ ತಮ್ಮ ಬೃಹತ್‌ ದೇಣಿಗೆಯ ಚೆಕ್‌ ಅನ್ನು ವಿಶ್ವ ಹಿಂದೂ ಪರಿಷತ್‌ಗೆ ಹಸ್ತಾಂತರಿಸಿದ್ದಾರೆ.

Advertisement

“ನಾನು 50 ವರ್ಷಗಳಿಂದ ಗುಹೆಯಲ್ಲಿ ವಾಸಿಸುತ್ತಿದ್ದೇನೆ. ಗುಹೆಗೆ ಆಗಮಿಸುವ ಭಕ್ತಾದಿಗಳು ನೀಡುವ ದೇಣಿಗೆಯನ್ನು ಒಂದೆಡೆ ಸಂಗ್ರಹಿಸಿ, ರಾಮಮಂದಿರ ನಿರ್ಮಾಣಕ್ಕೆ ದಾನವಾಗಿ ನೀಡುವುದು ನನ್ನ ದೀರ್ಘ‌ಕಾಲದ ಕನಸಾಗಿತ್ತು’ ಎಂದು ಸ್ವಾಮಿ ಶಂಕರ್‌ ದಾಸ್‌ ಹೇಳಿದ್ದಾರೆ.

ಸಾಧು 1 ಕೋಟಿ ರೂ. ಚೆಕ್‌ ಬರೆದಾಗ, ಬ್ಯಾಂಕ್‌ನವರಿಗೆ ಅಚ್ಚರಿಯಾಗಿತ್ತು. ಕೂಡಲೇ ಅವರ ಖಾತೆ ಪರಿಶೀಲಿಸಿದಾಗ ಅಷ್ಟು ಮೊತ್ತ ಇರುವುದು ದೃಢಪಟ್ಟಿದೆ. ಬಳಿಕ ಬ್ಯಾಂಕ್‌ನವರು ವಿಎಚ್‌ಪಿ, ಆರೆಸ್ಸೆಸ್‌ ಮುಖಂಡರನ್ನು ಆಹ್ವಾನಿಸಿ, ಸಾಧು ಅವರ ಬೃಹತ್‌ ಮೊತ್ತವನ್ನು ಸುರಕ್ಷಿತವಾಗಿ ಹಸ್ತಾಂತರಿಸಲು ನೆರವಾಗಿದ್ದಾರೆ.

ಇದನ್ನೂ ಓದಿ:ಇಸ್ರೇಲಿ ರಾಯಭಾರ ಕಚೇರಿ ಬಳಿ ಸ್ಫೋಟದ ವೇಳೆ 45 ಸಾವಿರ ಮೊಬೈಲ್‌‌ಗಳು ಸಕ್ರೀಯ!

Advertisement

Udayavani is now on Telegram. Click here to join our channel and stay updated with the latest news.

Next