Advertisement

ಫೆ.1ರಂದು ಸಭೆ ಕರೆದ್ರೆ ಬರಲು ಸಿದ್ಧ

06:15 AM Jan 04, 2018 | Team Udayavani |

ದಾವಣಗೆರೆ: ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ಹೊರಟ್ಟಿ ನೀಡಿರುವ ಆಹ್ವಾನ ಸೀÌಕರಿಸಿರುವ ಕಾಶಿ, ಶ್ರೀಶೈಲ,ರಂಭಾಪುರಿ, ಉಜ್ಜಯಿನಿ ಜಗದ್ಗುರುಗಳು ಸೇರಿದಂತೆ ವಿವಿಧ ಮಠಾಧೀಶರು, ಗುರು-ವಿರಕ್ತ
ಸ್ವಾಮೀಜಿಗಳು ಫೆ.1ರಂದು ಹುಬ್ಬಳ್ಳಿ ಇಲ್ಲವೆ ಬೆಂಗಳೂರಲ್ಲಿ ಸಭೆ ಆಯೋಜಿಸಿದ್ದಲ್ಲಿ ಚರ್ಚೆಗೆ ಬರಲು ಸಿದ್ಧರಿರುವುದಾಗಿ ಘೋಷಿಸಿದ್ದಾರೆ.

Advertisement

ದಾವಣಗೆರೆಯ ಅಭಿನವ ರೇಣುಕ ಮಂದಿರದಲ್ಲಿ ಬುಧವಾರ ಸಭೆ ನಡೆಸಿದ ಗುರು-ವಿರಕ್ತರು ಚರ್ಚಾಸಭೆ ಆಹ್ವಾನ ಸ್ವೀಕರಿಸಿದ್ದಲ್ಲದೆ, ಚರ್ಚಾಸಭೆಯಲ್ಲಿ ಭಾಗವಹಿಸಲು 11 ನಿರ್ಣಯ ಕೈಗೊಂಡರು.

ಸಭೆ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ನಿರ್ಣಯಗಳ ಬಗ್ಗೆ ಮಾಹಿತಿ ನೀಡಿದ ಬಾಲೇಹೊಸೂರಿನ ಶ್ರೀದಿಂಗಾಲೇಶ್ವರ ಸ್ವಾಮೀಜಿ, ಫೆ.1  ರಂದು ವೀರಶೈವ ಲಿಂಗಾಯತ ಮತ್ತು ಲಿಂಗಾಯತ ಧರ್ಮ ಕುರಿತು ಚರ್ಚಾಸಭೆ ಆಯೋಜಿಸಿದಲ್ಲಿ ಎಲ್ಲ ಗುರು-ವಿರಕ್ತರು ಭಾಗವಹಿಸಲು ಅನುಕೂಲ ಆಗುತ್ತದೆ. ಹುಬ್ಬಳ್ಳಿಯಲ್ಲೇ ಚರ್ಚಾ ಸಭೆ ನಡೆಯಬೇಕು ಎಂಬುದು ಇಚ್ಛೆ. ಆದರೆ, ಸಭೆಗೆ ಪೊಲೀಸ್‌ ಇಲಾಖೆಯ ಅನುಮತಿಗೆ ತೊಂದರೆಯಾದಲ್ಲಿ ಬೆಂಗಳೂರಿನ ಸೂಕ್ತ ಕಡೆ ಸಭೆ ನಡೆಸಿದರೂ ಭಾಗವಹಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

ವೀರಶೈವ-ಲಿಂಗಾಯತ, ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ನಡೆಸುತ್ತಿರುವ ಎರಡೂ ಬಣಗಳಿಂದ ತಲಾ 7 ಜನರು ಚರ್ಚಾ ಸಭೆಯಲ್ಲಿ ಭಾಗವಹಿಸುವುದು. ಉಭಯ ಬಣಗಳಿಂದ ಓರ್ವ ಮುಖ್ಯಸ್ಥರ ಆಯ್ಕೆ ಮಾಡಿ, ಅವರಿಗೆ ಸಭೆ ಸುಗಮವಾಗಿ ನಡೆಸಿಕೊಂಡು ಹೋಗುವ ಅಧಿಕಾರ ವಹಿಸುವುದು. ಉಭಯ ಬಣಗಳ ಚರ್ಚೆಯ ವಿಡಿಯೋ ಚಿತ್ರೀಕರಣ.

ಯಾವುದೇ ವ್ಯಕ್ತಿಗತ ಆರೋಪ, ಪ್ರತ್ಯಾ ರೋಪಕ್ಕೆ ಅವಕಾಶ ಕೊಡದೇ ಇರುವ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸುವ ನಿರ್ಣಯ ಕೈಗೊಳ್ಳಲಾಗಿದೆ. ಈ ಹಿಂದೆ ಅಖೀಲ ಭಾರತ ವೀರಶೈವ ಮಹಾಸಭಾ ಕೇಂದ್ರ ಸರ್ಕಾರಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಕೋರಿ ಸಲ್ಲಿಸಿದ್ದ ಪ್ರತ್ಯೇಕ 3 ಮನವಿಯಲ್ಲಿ ವೀರಶೈವ ಎಂಬ ಪದ ಇದ್ದ ಕಾರಣಕ್ಕೆ ಅರ್ಜಿಗಳು ತಿರಸ್ಕೃತಗೊಂಡಿವೆ ಎಂಬುದಾಗಿ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದವರು ಹೇಳಿಕೆ ನೀಡುತ್ತಿದ್ದಾರೆ. ಅರ್ಜಿ ತಿರಸ್ಕೃತವಾಗಿದ್ದರ ಕುರಿತ ಆದೇಶ ಪ್ರತಿಗಳನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಬೇಕು.

Advertisement

ಲಿಂಗಾಯತ ಪದಕ್ಕೆ ಸಂವಿಧಾನ ಬದ್ಧ ಪ್ರತ್ಯೇಕ ಮಾನ್ಯತೆಗೆ ಯಾವುದಾದರೂ ಅಧಿಕೃತ ಒಪ್ಪಿಗೆ ದೊರೆತಿದ್ದರೆ ಅದನ್ನು ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸುವ ನಿರ್ಣಯವನ್ನು ಸಭೆ ಕೈಗೊಂಡಿದೆ ಎಂದು ತಿಳಿಸಿದರು.

ಸರ್ಕಾರ ಇಲ್ಲವೇ ಯಾವುದೇ ಪಕ್ಷವಾಗಲಿ ವೀರಶೈವ ಲಿಂಗಾಯತ ಸಮುದಾಯದ ವಿಘಟನೆಗೆ ಕಾರಣವಾದವರ ವಿರುದ್ಧ ಮುಂದಿನ ಚುನಾವಣೆಯಲ್ಲಿ ಧರ್ಮಯುದ್ಧ ಸಾರುವ, ಶ್ರೀ ಮಧ್ವಿàರಶೈವ ಶಿವಯೋಗ ಮಂದಿರ ಧರ್ಮದರ್ಶಿ ಮಂಡಳಿಯಲ್ಲಿ ಇದ್ದುಕೊಂಡು ಕೇವಲ ಲಿಂಗಾಯತ ಪದ ಪ್ರಯೋಗ ಪ್ರತಿಪಾದಿಸುವವರ ತ್ಯಾಗಪತ್ರಕ್ಕೆ ಒತ್ತಾಯಿಸುವ ನಿರ್ಣಯಕ್ಕೆ ಬರಲಾಗಿದೆ ಎಂದರು.

ಚರ್ಚೆಯಿಂದ ಯಾವುದೇ ಫಲ ಇಲ್ಲ ಎಂದು ಬಸವರಾಜ ಹೊರಟ್ಟಿಯವರೇ ಹೇಳಿದ್ದಾರೆ. ಹಾಗಾಗಿ ಫೆ.1ರಂದು ಚರ್ಚಾ ಸಭೆ ನಡೆಯುವ ಮುನ್ನವೇ ಹೊರಟ್ಟಿಯವರು ರಾಜ್ಯ ಅಲ್ಪ  ಸಂಖ್ಯಾತ ಆಯೋಗ ನೇಮಿಸಿರುವ ತಜ್ಞರ ಸಮಿತಿಯ ಕಾರ್ಯ ಕಲಾಪ ತಡೆ ಹಿಡಿದರೆ ಮಾತ್ರವೇ ಚರ್ಚಾಸಭೆಯಲ್ಲಿ ಭಾಗವಹಿಸುವ ನಿರ್ಣಯವನ್ನು ಸಭೆ ಕೈಗೊಂಡಿದೆ ಎಂದು ತಿಳಿಸಿದರು.

ಕಾಶಿ ಜಗದ್ಗುರು ಡಾ|ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶ್ರೀಶೈಲ ಜಗದ್ಗುರು ಡಾ|ಚನ್ನಸಿದಟಛಿರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ರಂಭಾಪುರಿ ಜಗದ್ಗುರು ಪ್ರಸನ್ನ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಉಜ್ಜಯಿನಿ ಜಗದ್ಗುರು ಶ್ರೀ ಸಿದಟಛಿಲಿಂಗ ರಾಜ ದೇಶಿಕೇಂದ್ರ ಸ್ವಾಮೀಜಿ, ಹೊಸಪೇಟೆಯ ಜಗದ್ಗುರು ಡಾ| ಸಂಗನಬಸವ ಸ್ವಾಮೀಜಿ, ಬಬಲೇಶ್ವರ, ಮನಗೂಳಿ, ಕೊಟ್ಟೂರು, ಹರಪನಹಳ್ಳಿ, ಹೊಟ್ಯಾಪುರ, ರಾಂಪುರ, ರಟ್ಟಿಹಳ್ಳಿ, ಬೆಂಗಳೂರು ಸರ್ಪಭೂಷಣ ಮಠ, ಮಧ್ಯ  ಪ್ರದೇಶದ ಪಾಂಡೂರು, ಶಿವಗಂಗಾ, ಅಕ್ಕಲಕೋಟೆ, ಬಳಕಿ, ಅಮೀನಗಡ, ಬೀರೂರು, ಹಣ್ಣೆ,ದಿಂಡದೂರು ಶ್ರೀಗಳು, ನ್ಯಾಯವಾದಿಗಳು, ದೇವರಮನೆ ಶಿವಕುಮಾರ್‌, ಅಜ್ಜಂಪುರಶೆಟ್ರಾ ಮೃತ್ಯುಂಜಯ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ಶಿಫಾರಸು ಮಾಡಿದರೆ ಹೋರಾಟ’
ದಾವಣಗೆರೆ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಶಿಫಾರಸು ಮಾಡಿದಲ್ಲಿ ಅದನ್ನು ವಿರೋಧಿಸಿ ತೀವ್ರ ಹೋರಾಟ ನಡೆಸಲಾಗುವುದು ಎಂದು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಎಚ್ಚರಿಕೆ ನೀಡಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗ ಉದ್ಭವಿಸಿರುವ ವೀರಶೈವ- ಲಿಂಗಾಯತ, ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವನ್ನು ಸಿದ್ದರಾಮಯ್ಯ ಅವರು ಕೂಡಲೇ ಉಪಶಮನ ಮಾಡಬೇಕು. ಒಂದೊಮ್ಮೆ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಶಿಫಾರಸು ಮಾಡಿದಲ್ಲಿ ಗುರು-ವಿರಕ್ತರಿಂದ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು.

ಮುಂಬರುವ ಚುನಾವಣಾ ದೃಷ್ಟಿಯಿಂದ ಅಖಂಡ ವೀರಶೈವ ಸಮಾಜವನ್ನು ಒಡೆದು ಅದರ ಪ್ರಯೋಜನ ಪಡೆಯಲು ಇಲ್ಲಸಲ್ಲದ ನಿರ್ಧಾರಕ್ಕೆ ಸರ್ಕಾರ ಬಂದಲ್ಲಿ ಗುರು-ವಿರಕ್ತರು ತೀವ್ರ ವಿರೋಧಿಸಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next