Advertisement

ಬೀಜ ಮಸೂದೆ ಜಾರಿಗೆ ವಿರೋಧ

03:02 PM Feb 14, 2020 | Suhan S |

ತಿಪಟೂರು: ಹಲವು ಬಿಕ್ಕಟ್ಟುಗಳಿಂದ ನರಳುತ್ತಿರುವ ಕೃಷಿ ಕ್ಷೇತ್ರವನ್ನು ಮತ್ತಷ್ಟು ಅಪಾಯಕ್ಕೆ ದೂಡುವ ಕೃಷಿ ವಿನಾಶಕಾರಿ ಬೀಜ ಮಸೂದೆ ಜಾರಿಗೆ ಮುಂದಾಗು ತ್ತಿರುವುದು ಖಂಡನೀಯ ಎಂದು ತುಮಕೂರಿನ ಸಹಜ ಬೇಸಾಯ ಶಾಲೆಯ ಡಾ.ಮಂಜುನಾಥ್‌ ತಿಳಿಸಿದರು.

Advertisement

ನಗರದ ಎಪಿಎಂಸಿಯ ರೈತ ಭವನದಲ್ಲಿ ಸಹಜ ಬೇಸಾಯ ಶಾಲೆ, ರಾಜ್ಯ ರೈತ ಸಂಘ, ಕರ್ನಾಟಕ ಪ್ರಾಂತ್ಯ ರೈತ ಸಂಘ, ಅಖೀಲ ಭಾರತ ಕಿಸಾನ್‌ ಸಭಾ ಮತ್ತು ಆಸಕ್ತ ಪ್ರಜ್ಞಾವಂತ ನಾಗರಿಕರ ಸಹಯೋಗದಡಿ ಬೀಜ ಮಸೂದೆ-2019 ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿ, ನೂತನ ಕಾಯ್ದೆಯಡಿ ಬೀಜ ವಾಣಿಜ್ಯೀಕರಣ ಪ್ರೋತ್ಸಾಹಿಸಿ ಲಾಭಕೋರ ಬಹುರಾಷ್ಟ್ರೀಯ ಬೀಜ ಕಂಪನಿಗಳಿಗೆ ದುಬಾರಿ ಬೆಲೆ ನಿಗದಿಪಡಿಸಿ ಮಾರುವ ಹಕ್ಕು ನೀಡುವ ಬೀಜ ಮಸೂದೆ ಜಾರಿಗೊಳಿಸಲು ತಯಾರಿ ನಡೆಸಿ ರೈತರ ಹಕ್ಕು ಕಿತ್ತುಕೊಳ್ಳಲು ಮುಂದಾಗಿದೆ ಎಂದು ದೂರಿದರು.

ತುಮಕೂರಿನ ಆರ್ಡರ್‌ ಸಂಸ್ಥೆ ಯೋಜನಾ ನಿರ್ದೇಶಕ ಜಿ.ವಿ. ರಘು ಮಾತನಾಡಿ, ಬಹುರಾಷ್ಟ್ರೀಯ ಕಂಪನಿಗಳು ಪಾಶ್ಚಿಮಾತ್ಯ ಮಾದರಿ ಜಾರಿಗೆ ತಂದು ಇಳುವರಿ, ಗುಣಮಟ್ಟದಲ್ಲಿ ವ್ಯತ್ಯಯ ಉಂಟು ಮಾಡಿವೆ. ಇದರ ಜೊತೆಗೆ ಬೀಜ ಮಸೂದೆ ಜಾರಿಗೆ ತಂದರೆ ಮಾರಕವಾಗಲಿದೆ ಎಂದರು.

ತುಮಕೂರು ವಿಜ್ಞಾನ ಕೇಂದ್ರದ ಯತಿರಾಜ್‌, ಆರ್ಡರ್‌ ಸಂಸ್ಥೆಯ ಮಾಧವನ್‌, ರಾಜ್ಯ ರೈತ ಸಂಘದ ಕಾರ್ಯದರ್ಶಿ ಬೆನ್ನಾಯಕನಹಳ್ಳಿ ದೇವ ರಾಜು, ಪ್ರಾಂತೀಯ ರೈತ ಸಂಘದ ತಾಲೂಕು ಅಧ್ಯಕ್ಷ ಚನ್ನಬಸವಯ್ಯ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next