Advertisement

ತೈಲ ಬೆಲೆ ಏರಿಕೆಗೆ ಖಂಡನೆ

11:48 AM Jul 01, 2020 | Naveen |

ಶಹಾಬಾದ: ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆಯಿಂದ ಜನಸಾಮಾನ್ಯರ ಮೇಲೆ ಹೊರೆಯಾಗುತ್ತಿದ್ದರೂ, ಕೇಂದ್ರ ಸರ್ಕಾರ ಅದನ್ನು ಕಡಿಮೆಗೊಳಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಜೆಡಿಎಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಮರಾವ ಸೂರನ್‌ ಹೇಳಿದರು.

Advertisement

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ತಡೆಗಟ್ಟಬೇಕೆಂದು ಒತ್ತಾಯಿಸಿ ಮಂಗಳವಾರ ಜೆಡಿಎಸ್‌ ಪಕ್ಷದ ವತಿಯಿಂದ ನಗರದ ಅಂಬೇಡ್ಕರ್‌ ಪ್ರತಿಮೆ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಕಳೆದ ಇಪ್ಪತ್ತು ದಿನಗಳಲ್ಲಿ ಪೆಟ್ರೋಲ್‌ ಮತ್ತು ಡಿಸೇಲ್‌ ದರ 10 ರೂ. ಹೆಚ್ಚಳವಾಗಿದೆ. ಕೇಂದ್ರ ಸರ್ಕಾರ ಕೂಡಲೇ ಜನವಿರೋಧಿ ನೀತಿ ಕೈಬಿಡಬೇಕು ಎಂದರು.

ಜೆಡಿಎಸ್‌ ಅಧ್ಯಕ್ಷ ರಾಜ ಮಹ್ಮದ್‌ ರಾಜಾ, ಪ್ರಧಾನ ಕಾರ್ಯದರ್ಶಿ ಲೋಹಿತ್‌ ಕಟ್ಟಿ, ಮೈನೊದ್ದೀನ್‌, ನಾಮದೇವ ಕಾಂಬಳೆ, ನಗರಸಭೆ ಸದಸ್ಯ ಅಮ್ಜದ್‌ ಹುಸೇನ, ಅಬ್ದುಲ್‌ ಜಬ್ಟಾರ, ವಿಜಯಲಕ್ಷ್ಮೀ ಬಂಗರಗಿ, ಮಹ್ಮದ ಚಾಂದ ವಾಹೀದಿ, ಬಸವರಾಜ ಮಯೂರ, ಯೂಸುಫ್‌ ಸಾಹೇಬ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next