Advertisement

ದಾಳಿ ಸಾಧ್ಯತೆ ಹಿನ್ನಲೆ:ಬಿಂದು,ಕನಕದುರ್ಗ ನಿವಾಸಕ್ಕೆ ಬಿಗಿ ಭದ್ರತೆ

07:37 AM Jan 02, 2019 | Team Udayavani |

ತಿರುವನಂತಪುರಂ: ಶಬರಿ ಮಲೆ ದೇಗುಲವನ್ನು ಬುಧವಾರ ಪ್ರವೇಶಿಸಿದ ಮಹಿಳೆಯರಾದ ಬಿಂದು ಮತ್ತು ಕನಕದುರ್ಗ ಅವರ ನಿವಾಸಗಳಿಗೆ ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಗಿದ್ದು, ಇಬ್ಬರನ್ನು ಸುರಕ್ಷಿತ ಸ್ಥಳದಲ್ಲಿರಿಸಲಾಗಿದೆ. 

Advertisement

ಅಂಗಮಾಲಿ ಪ್ರದೇಶದ ಮನೆಯೊಂದರಲ್ಲಿ ತಂಗಿದ್ದ ಇಬ್ಬರನ್ನು ಪೊಲೀಸ್‌ ಭದ್ರತೆಯೊಂದಿಗೆ ತ್ರಿಶ್ಯೂರ್‌ ಕಡೆಗೆ ಕರೆದೊಯ್ದು ಸುರಕ್ಷಿತವಾಗಿರಿಸಲಾಗಿದೆ ಎಂದು ತಿಳಿದು ಬಂದಿದೆ. 

ಕೋಝಿಕೋಡ್‌ನ‌ ಕೊಯಿಲಾಂಡಿಯಲ್ಲಿರುವ ಬಿಂದು ನಿವಾಸ ಮತ್ತು ಮಲಪ್ಪುರಂನಲ್ಲಿರುವ ಅಂಗಡಿಪ್ಪುರಂನಲ್ಲಿರುವ ಕನಕದುರ್ಗ ನಿವಾಸದ ಮೇಲೆ ದಾಳಿ ನಡೆಸುವ ಎಲ್ಲಾ ಸಾಧ್ಯತೆಗಳಿರುವ ಹಿನ್ನಲೆಯಲ್ಲಿ ಕಾವಲಿಗೆ ಪೊಲೀಸ್‌ ಪಡೆಗಳನ್ನು ನಿಯೋಜಿಸಲಾಗಿದೆ.

ಅಯ್ಯಪ್ಪ ಭಕ್ತರು ಮತ್ತು ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಆಕ್ರೋಶ ಹೊರ ಹಾಕುತ್ತಿದ್ದು, ಸರಕಾರ, ಪೊಲೀಸರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next