Advertisement

ಕಾಶ್ಮೀರಿ ವಿದ್ಯಾರ್ಥಿಗಳಿಗೆ ಪಾಕ್‌ ಸ್ಕಾಲರ್‌ಶಿಪ್‌: ಭಾರತ ಆಕ್ರೋಶ

10:14 PM Jun 11, 2020 | Sriram |

ನವದೆಹಲಿ: ಪಾಕಿಸ್ತಾನದಲ್ಲಿ ಓದಲು 1600 ಕಾಶ್ಮೀರಿ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ನೀಡುವ ಪ್ರಧಾನಿ ಇಮ್ರಾನ್‌ ಖಾನ್‌ ಯೋಜನೆಗೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

Advertisement

“ಕಾಶ್ಮೀರದ ಯುವಕರನ್ನು ಭಾರತದ ವಿರುದ್ಧ ಎತ್ತಿಕಟ್ಟಲು ಪಾಕ್‌ ಇಂಥ ನಾಟಕವಾಡುತ್ತಿದೆ. ಸ್ಕಾಲರ್‌ಶಿಪ್‌ ಪಡೆದ ವಿದ್ಯಾರ್ಥಿಗಳು ವಾಘಾ- ಅಟ್ಟಾರಿ ಗಡಿ ಮೂಲಕ ಹೋಗಿ, ಉಗ್ರವಾದಿಗಳಾಗಿ ಎಲ್‌ಒಸಿ ಮೂಲಕ ಮರಳಿ ಬಂದಿದ್ದಾರೆ’ ಎಂದು ಜಮ್ಮು ಮತ್ತು ಕಾಶ್ಮೀರದ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

“ವಿದ್ಯಾರ್ಥಿ ವೀಸಾದಡಿ ಪಾಕ್‌ಗೆ ವ್ಯಾಸಂಗಕ್ಕೆಂದು ಹೋಗುವ ಹೆಚ್ಚಿನವರು ಮಾಜಿ ಉಗ್ರರ ಸಂಬಂಧಿಕರಾಗಿರುತ್ತಾರೆ. ಇಲ್ಲವೇ ದೇಶವಿರೋಧಿ ಚಟುವಟಿಕೆ ನಡೆಸಿ, ಪಾಕಿಸ್ತಾನಕ್ಕೆ ಹೋದವರ ಬಂಧುಗಳಾಗಿರುತ್ತಾರೆ’ ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಆರೋಪಿಸಿದೆ.

ಕಾಶ್ಮೀರದ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ನೀಡುವ ಯೋಜನೆಯನ್ನು ಪಾಕ್‌ ಈ ವರ್ಷದ ಆರಂಭದಲ್ಲಿ ಜಾರಿಗೆ ತಂದಿತ್ತು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next