Advertisement

ಸೇಫ್ ಲಾಕರ್‌ಗಳ ಭದ್ರತೆ ಖಾತರಿಪಡಿಸಿ: ಆರ್‌ಬಿಐ

08:55 AM Aug 09, 2017 | Team Udayavani |

ಹೊಸದಿಲ್ಲಿ: ಬ್ಯಾಂಕ್‌ ಸೇಫ್ ಲಾಕರ್‌ಗಳಿಂದ ಅಮೂಲ್ಯ ವಸ್ತುಗಳ ಕಳವಾದರೆ ಅದಕ್ಕೆ ಬ್ಯಾಂಕ್‌ಗಳು ಜವಾಬ್ದಾರರಲ್ಲ ಎಂದು ರಿಸರ್ವ್‌ ಬ್ಯಾಂಕ್‌ ಹಿಂದೆ ಹೇಳಿದ್ದೇನೋ ಹೌದು. ಆದರೆ ಈಗ ಭದ್ರತೆಯನ್ನು ಖಾತರಿಪಡಿಸಿ, ಬೇಜವಾಬ್ದಾರಿ ತೋರಿಸ ಬೇಡಿ ಎಂದು ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ. 

Advertisement

ಜೊತೆಗೆ ಒಂದು ವೇಳೆ ಸೇಫ್ಲಾಕರ್‌ಗಳಿಂದ ವಸ್ತುಗಳು ಕಳವಾದರೆ, ಗ್ರಾಹಕರು ಈ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬಹುದು ಎಂದು ಎಚ್ಚರಿಸಿದೆ. ಈ ವಿಚಾರ ಸಂಬಂಧ ರಾಜ್ಯಸಭೆಗೆ ಲಿಖೀತ ಉತ್ತರ ನೀಡಿದ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟಿÉ ಅವರು, ಒಂದು ವೇಳೆ ಸೇಫ್ ಲಾಕರ್‌ನಿಂದ ಹಣ ಅಥವಾ ಚಿನ್ನಾಭರಣಗಳು ಕಳವಾದರೆ, ಗ್ರಾಹಕರಿಗೆ ಪರಿಹಾರ ನೀಡುವಂತೆ ಯಾವುದೇ ಆದೇಶ ಹೊರಡಿಸಲಾಗಿಲ್ಲ. ಆದರೆ ಲಾಕರ್‌ಗಳ ಬಗ್ಗೆ ನಿರ್ಲಕ್ಷ್ಯ ವಹಿಸದೇ, ಭದ್ರತೆ ಖಾತರಿಪಡಿ ಸುವಂತೆ ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚಿಸಿದೆ ಎಂದು ಹೇಳಿದ್ದಾರೆ. ಜೂನ್‌ನಲ್ಲಿ ಆರ್‌ಟಿಐ ಅರ್ಜಿಯೊಂದಕ್ಕೆ ಉತ್ತರಿಸಿದ್ದ ಆರ್‌ಬಿಐ, ಲಾಕರ್‌ನಲ್ಲಿನ ವಸ್ತು ಕಳವಾದರೆ ಅದಕ್ಕೆ ಬ್ಯಾಂಕುಗಳು ಹೊಣೆಯಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next