Advertisement

ದ್ವಿತೀಯ ಪಿಯುಸಿ: 781 ಮಂದಿ ಗೈರು

01:52 AM Mar 08, 2020 | Sriram |

ಮಂಗಳೂರು/ಉಡುಪಿ: ದ್ವಿತೀಯ ಪಿಯುಸಿ ಪರೀಕ್ಷೆಗೆ ಶನಿವಾರ ಉಭಯ ಜಿಲ್ಲೆಗಳಲ್ಲಿ 781 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.

Advertisement

ಬಿಸಿನೆಸ್‌ ಸ್ಟಡೀಸ್‌ಗೆ ನೋಂದಣಿ ಮಾಡಿಕೊಂಡ ಒಟ್ಟು 16,055ರಲ್ಲಿ 15,647 ಮಂದಿ ಹಾಜರಾಗಿ 408 ಮಂದಿ ಗೈರು ಹಾಜರಾಗಿದ್ದಾರೆ. ಸಮಾಜಶಾಸ್ತ್ರ ಪರೀಕ್ಷೆಗೆ 4,058 ಮಂದಿ ನೋಂದಣಿ ಮಾಡಿಕೊಂಡಿದ್ದು, 3,931 ಮಂದಿ ಹಾಜರಾಗಿ 127 ಮಂದಿ ಗೈರಾಗಿದ್ದಾರೆ. ರಸಾಯನಶಾಸ್ತ್ರ ಪರೀಕ್ಷೆಗೆ 13,115 ಮಂದಿ ನೋಂದಣಿ ಮಾಡಿಕೊಂಡಿದ್ದು, 13,040 ಹಾಜರಾಗಿ 75 ಮಂದಿ ಗೈರು ಹಾಜರಾಗಿದ್ದಾರೆ.

ಮಾ. 11ರಂದು ಕನ್ನಡ ಐಚ್ಛಿಕ, ಅಕೌಂಟೆನ್ಸಿ ಮತ್ತು ಗಣಿತ ಪರೀಕ್ಷೆ ನಡೆಯಲಿದೆ.

ಉಡುಪಿ: 171 ಮಂದಿ ಗೈರು
ಉಡುಪಿ: ಜಿಲ್ಲೆಯಲ್ಲಿ ಶನಿವಾರ ನಡೆದ ವ್ಯವಹಾರಿಕಅಧ್ಯಯನ, ಸಮಾಜಶಾಸ್ತ್ರ, ರಸಾಯನಶಾಸ್ತ್ರ ವಿಷಯಗಳಲ್ಲಿ ಪರೀಕ್ಷೆಯಲ್ಲಿ 171 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ.

ಹಾಜರಾದ ಒಟ್ಟು 14,737ರಲ್ಲಿ 14,566 ಮಂದಿ ಪರೀಕ್ಷೆ ಬರೆದರು. ವ್ಯವಹಾರ ಅಧ್ಯಯನ ವಿಷಯಕ್ಕೆ ಹಾಜರಾದ 8,087ರಲ್ಲಿ 94 ಮಂದಿ ಗೈರುಹಾಜರಾಗಿದ್ದರೆ 7,993 ಮಂದಿ ಪರೀಕ್ಷೆ ಬರೆದರು. ಸಮಾಜಶಾಸ್ತ್ರ ವಿಷಯದಲ್ಲಿ ಒಟ್ಟು 1,685ರಲ್ಲಿ 1,629 ಮಂದಿ ಪರೀಕ್ಷೆ ಬರೆದರೆ 56 ಮಂದಿ ಗೈರು ಹಾಜರಾಗಿದ್ದರು. ರಸಾಯನಶಾಸ್ತ್ರ ವಿಷಯದಲ್ಲಿ 4,965ರಲ್ಲಿ 4,944 ಮಂದಿ ಹಾಜರಾಗಿದ್ದರೆ 21 ಮಂದಿ ಗೈರು ಹಾಜರಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next