Advertisement

ಕೋಡಿ: ಅಲೆಗಳಬ್ಬರಕ್ಕೆ ವಿದ್ಯಾರ್ಥಿ ಸಮುದ್ರಪಾಲು

10:08 AM Oct 01, 2018 | |

ಕುಂದಾಪುರ: ಸಮುದ್ರ ತೀರಕ್ಕೆ ತೆರಳಿದ್ದ ಕಾಲೇಜು ವಿದ್ಯಾರ್ಥಿಯೋರ್ವ ಕಾಲುಜಾರಿ, ಬೃಹತ್‌ ಗಾತ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ನೀರು ಪಾಲಾದ ಘಟನೆ ರವಿವಾರ ಕೋಡಿ ಬೀಚ್‌ನಲ್ಲಿ ಸಂಭವಿಸಿದೆ.  ಕೋಡಿಯ ಹಳೆ ಅಳಿವೆ ನಿವಾಸಿ ಮಂಜ ಪೂಜಾರಿ ಹಾಗೂ ದೇವಕಿ ಪೂಜಾರ್ತಿ ದಂಪತಿ ಪುತ್ರ ಮನೋಜ್‌ ಪೂಜಾರಿ (18) ಸಮುದ್ರ ಪಾಲಾದ ವಿದ್ಯಾರ್ಥಿ. 

Advertisement

ಅವರು ಕೋಡಿಯಲ್ಲಿ ತಮ್ಮ ಮನೆಯ ಸಮೀಪವೇ ಇರುವ ಸಮುದ್ರಕ್ಕೆ ಮಧ್ಯಾಹ್ನ ತಂದೆಯ ಜತೆಗೆ ಮೀನುಗಾರಿಕೆಗೆಂದು ತೆರಳಿದ್ದಾಗ ದುರಂತ ಸಂಭವಿಸಿದೆ.  ಸಂಜೆಯವರೆಗೂ ನೀರುಪಾಲಾದ ಯುವಕನ ಪತ್ತೆಯಾಗಿಲ್ಲ. ಕುಂದಾಪುರ ಎಸ್‌ಐ ಹರೀಶ್‌ ಆರ್‌. ನಾಯ್ಕ, ವೃತ್ತ ನಿರೀಕ್ಷಕ ಮಂಜಪ್ಪ, ಘಟನಾ ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಪಡೆದುಕೊಂಡಿದ್ದಾರೆ. 

ಅಗ್ನಿ ಶಾಮಕ ದಳದ ಸಿಬಂದಿ, ಸ್ಥಳೀಯ ಲೈಫ್‌ಗಾರ್ಡ್‌, ಪೊಲೀ ಸರು, ನಾಗರಿಕರು ಕಾರ್ಯಾ ಚರಣೆ ಯಲ್ಲಿ ಪಾಲ್ಗೊಂಡಿದ್ದರು. ಹತ್ತಾರು ದೋಣಿಗಳ ಮೂಲಕ ಸ್ಥಳೀಯರು ಮನೋಜ್‌ಗಾಗಿ ಹುಡುಕಾಟ ನಡೆಸಿದರು. ಬಳಿಕ ಕೈರಂಪಣಿ ಬಲೆ ಬಳಸಿ ನೂರಕ್ಕೂ ಅಧಿಕ ಮೀನುಗಾರರು ತಮ್ಮ ಜೀವದ ಹಂಗು ತೊರೆದು ಕಡಲಿಗಿಳಿದು ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ.

ಒಬ್ಬನೇ ಪುತ್ರ
ಮನೋಜ್‌ ಕೋಡಿಯ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾಗಿದ್ದು, ತಂದೆ ಮಂಜ ಪೂಜಾರಿ ಅವರು ಮೀನುಗಾರರಾಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ. ಈ ದಂಪತಿಗೆ ಮನೋಜ್‌ ಒಬ್ಬನೇ ಪುತ್ರರಾಗಿದ್ದು, ಇಬ್ಬರು ಪುತ್ರಿಯರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next