Advertisement

ದ್ವಿತೀಯ ವಾರ್ಷಿಕೋತ್ಸವ ಸಂಭ್ರಮ:ಬ್ರಾಮರೀ ಯಕ್ಷಮಿತ್ರರು ವಾಟ್ಸಪ್‌ ಬಳಗ

09:20 AM Aug 18, 2017 | |

ಆಧುನಿಕ ಸಂವಹನ ತಂತ್ರಜ್ಞಾನದ ಉತ್ಪನ್ನವಾದ ವಾಟ್ಸಾಪ್‌ ಇಂದು ಪ್ರಬಲ ಮಾಹಿತಿ ಮಾಧ್ಯಮವಾಗಿ ಗುರುತಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಲಕ್ಷಾಂತರ ಮಂದಿಗೆ ಸಂದೇಶ ಅಥವಾ ಫೋಟೋ ಕಳಿಸಬಲ್ಲ ವಾಟ್ಸಾಪ್‌ ಇಂದು ಎಲ್ಲ ವರ್ಗದ ಜನರ ನಡುವೆ ಜನಪ್ರಿಯವಾಗಿದೆ. ಯಕ್ಷಗಾನವೂ ವಾಟ್ಸಾಪ್‌ನ ಪ್ರಭಾವಕ್ಕೆ ಒಡ್ಡಿಕೊಂಡಿದೆ. ವಾಟ್ಸಾಪ್‌ನಲ್ಲಿ ಯಕ್ಷಗಾನ ಸಂಬಂಧಿ ಗುಂಪುಗಳು ಗಮನಾರ್ಹ ಪ್ರಮಾಣದಲ್ಲಿವೆ. ಒಂದು ಗುಂಪಿನಲ್ಲಿ ತಲಾ 256 ಮಂದಿ ಸದಸ್ಯರನ್ನು ಹೊಂದಿರಬಲ್ಲ ಈ ಸಾಮಾಜಿಕ ವೇದಿಕೆಯಲ್ಲಿ ಯಕ್ಷಗಾನಕ್ಕೆ ಮೀಸಲಾದ ಸಾವಿರಕ್ಕೂ ಮಿಕ್ಕು ಗುಂಪುಗಳಿವೆ.

Advertisement

ಇಂಥ ಯಕ್ಷಗಾನ ವಾಟ್ಸಾಪ್‌ ಗುಂಪುಗಳಲ್ಲಿ ಬ್ರಾಮರೀ ಯಕ್ಷಮಿತ್ರರು (ರಿ.) ಮಂಗಳೂರು ಒಂದು. 2015ರ ಫೆಬ್ರವರಿ 16ರಂದು ವಿನಯಕೃಷ್ಣ ಕುರ್ನಾಡ್‌ ಅವರಿಂದ “ಯಕ್ಷಮಿತ್ರರು’ ಎಂಬ ಹೆಸರಿನಲ್ಲಿ ವಾಟ್ಸಾಪ್‌ ಗುಂಪು ಆಗಿನ ನಿಯಮದಂತೆ ನೂರು ಮಂದಿ ಸದಸ್ಯರನ್ನೊಳಗೊಂಡು ಸ್ಥಾಪಿಸಲ್ಪಟ್ಟಿತು. ಇದೀಗ ಹೊಸ ನಿಯಮದಂತೆ ಬಳಗ ಹಲವಾರು ಸದಸ್ಯರ ಸೇರ್ಪಡೆಯೊಂದಿಗೆ ವಿಸ್ತಾರವಾಗಿ ಬೆಳೆದಿದೆ. ಸಮಾನ ಆಸಕ್ತಿಯ ಗೆಳೆಯರೆಲ್ಲ ಒಂದೆಡೆ ಸೇರುವಂತೆ ಮಾಡಿದೆ ಈ ವೇದಿಕೆ. “ಯಕ್ಷಮಿತ್ರರು’ ಅನ್ನುವ ಹೆಸರಲ್ಲಿ ಹಲವಾರು ಬಳಗಗಳು ಇರುವ ಕಾರಣಕ್ಕೆ ಹೊಸ ನಾಮಧೇಯ ಬೇಕೆಂಬ ಹಂಬಲದೊಂದಿಗೆ “ಬ್ರಾಮರೀ ಯಕ್ಷಮಿತ್ರರು’ ಮಂಗಳೂರು ಎಂಬುದಾಗಿ ನಾಮಕರಣ ಮಾಡಿ ನೋಂದಾಯಿಸಲಾಗಿದೆ.

ಯಕ್ಷವೈಭವದ ಕುರಿತು
ಬಳಗದ ಸದಸ್ಯರಲ್ಲೊಬ್ಬರು ಕಳೆದ ವರ್ಷ ಯಕ್ಷಗಾನ ಸಂಬಂಧಿ ಮಾಹಿತಿ ಹಂಚೋಣಕ್ಕಷ್ಟೇ ಸೀಮಿತವಾಗುವ ಬದಲು ಯಕ್ಷಗಾನ ಪ್ರದರ್ಶನ ಸಂಘಟಿಸಬಾರದೇಕೆ ಎಂಬ ಆಲೋಚನೆಯನ್ನು ಗುಂಪಿನಲ್ಲಿ ಹರಿಯಬಿಟ್ಟುದು “ಯಕ್ಷ ವೈಭವ’ವನ್ನು ಸಂಘಟಿಸುವುದಕ್ಕೆ ನಾಂದಿಯಾಯಿತು. ಬಳಗದ ಸರ್ವ ಸದಸ್ಯರ ಪ್ರೋತ್ಸಾಹ, ಹಿತೈಷಿ ಕಲಾಪೋಷಕರ ಕೃಪೆ, ಕಲಾವಿದರ ಸಹಕಾರದೊಂದಿಗೆ 2016ರ ಆಗÓr… 20ರಂದು ಮಂಗಳೂರಿನ ಪುರಭವನದಲ್ಲಿ ಯಶಸ್ವೀ ಯಕ್ಷಗಾನ ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ಹಿರಿಯ ಕಲಾವಿದ ಸಂಪಾಜೆ ಶೀನಪ್ಪ ರೈ ಅವರಿಗೆ “ಭಾÅಮರೀ ಯಕ್ಷಮಣಿ’ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಅದನ್ನು ಮುಂದುವರಿಸುವ ನಿಟ್ಟಿನಲ್ಲಿ ಈ ಬಾರಿಯೂ ಯಕ್ಷ ವೈಭವ ಆಗಸ್ಟ್‌ 19, 2017ರಂದು ರಾತ್ರಿ ಎಂಟರಿಂದ ಮಂಗಳೂರಿನ ಪುರಭವನದಲ್ಲಿ ತೆಂಕುತಿಟ್ಟಿನ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ನಾಲ್ಕು ಪೌರಾಣಿಕ ಪ್ರಸಂಗಗಳೊಂದಿಗೆ ಆಯೋಜನೆಗೊಂಡಿದೆ. ಈ ಸಂದರ್ಭದಲ್ಲಿ ಯಕ್ಷಗಾನ ಪ್ರಸಂಗಕರ್ತ, ಛಾಂದಸ,  ಹಿಮ್ಮೇಳದ ಸವ್ಯಸಾಚಿ ಕಲಾವಿದ  ಗಣೇಶ್‌ ಕೊಲೆಕಾಡಿ ಅವರಿಗೆ ಭಾÅಮರೀ ಯಕ್ಷಮಣಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. 

ಗಣೇಶ್‌ ಕೊಲೆಕಾಡಿಯವರು ಛಂದಸ್ಸಿನಲ್ಲಿ ಅಪಾರ ಸಾಧನೆ ಮಾಡಿದವರು. ಅಭಿನವ ನಾಗವರ್ಮ  ಬಿರುದಾಂಕಿತರಾದ  ಡಾ| ಶಿಮಂತೂರು ನಾರಾಯಣ ಶೆಟ್ಟರ ಶಿಷ್ಯರಾಗಿ, ಯಕ್ಷಗಾನ ಛಂದಸ್ಸುಗಳ ಕುರಿತು ಆಳವಾದ ಸಂಶೋಧನೆ ಮಾಡಿದವರು. 40ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗ ರಚನೆ, ಹಿಮ್ಮೇಳ ಹಾಗೂ ಮುಮ್ಮೇಳಗಳ ಸಮರ್ಥ ಕಲಾವಿದರಾಗಿಯೂ ಪ್ರಸಿದ್ಧಿ ಗಳಿಸಿದವರು. ನೂರಾರು ವಿದ್ಯಾರ್ಥಿಗಳಿಗೆ ಹಿಮ್ಮೇಳ ಹಾಗೂ ಛಂದಸ್ಸನ್ನು ಉಚಿತವಾಗಿ  ಕಲಿಸುತ್ತಿದ್ದಾರೆ.

ಪ್ರಸಂಗ ರಚನೆ, ಯಕ್ಷಗಾನ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವಿಕೆ ಮುಂತಾದ ಯಕ್ಷಗಾನೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ, ಅಪಾರ ಶಿಷ್ಯವರ್ಗವನ್ನು ಹೊಂದಿರುವ ಅಪೂರ್ವ ಸಾಧಕರು ಕೊಲೆಕಾಡಿಯವರು. 

Advertisement

ಯಕ್ಷ ವೈಭವದ ಇದೇ ಸಂದರ್ಭದಲ್ಲಿ ಯಕ್ಷಗಾನದ ಬಣ್ಣದಮನೆಯಲ್ಲಿ ಸೇವೆಗೈಯುತ್ತಿರುವ ನೇಪಥ್ಯ ಕಲಾವಿದರು ಹಾಗೂ ರಂಗ ಸಹಾಯಕ ಕಟೀಲು ಮೇಳದ ಶಿವಣ್ಣ ಸರಪಾಡಿ ಹಾಗೂ ಬಪ್ಪನಾಡು ಮೇಳದ ಕೊರಗಪ್ಪ ಇವರನ್ನೂ ಗೌರವಿಸಲಾಗುವುದು. 

ಎಂ. ಶಾಂತರಾಮ ಕುಡ್ವ

Advertisement

Udayavani is now on Telegram. Click here to join our channel and stay updated with the latest news.

Next