Advertisement

ಕೇಂದ್ರ ತಂಡಕ್ಕೆ ಮತ್ತೆ ದೀದಿ ಅವಮಾನ

01:06 AM Apr 26, 2020 | Sriram |

ಕೋಲ್ಕತ್ತಾ: ಪಶ್ಚಿಮ ಬಂಗಾಲ ಮತ್ತು ಕೇಂದ್ರ ಸರಕಾರ ನಡುವಿನ “ಕೋವಿಡ್-19 ಗುದ್ದಾಟ’ ಮುಂದುವರಿದಿದೆ. ಕೇಂದ್ರದಿಂದ ಪರಿಶೀಲನೆಗೆ ಆಗಮಿಸುವ ತಂಡವನ್ನು ಸಿಎಂ ಮಮತಾ ಬ್ಯಾನರ್ಜಿ ನಿರ್ಲಕ್ಷ್ಯ ತೋರುತ್ತಿರುವುದು ಇದೀಗ ಗೃಹ ಸಚಿವ ಅಮಿತ್‌ ಶಾ ಅವರ ಮುನಿಸಿಗೆ ಕಾರಣವಾಗಿದೆ.

Advertisement

ಹಿರಿಯ ಐಎಎಸ್‌ ಅಧಿಕಾರಿ ಅಪೂರ್ವ ಚಂದ್ರ ನೇತೃತ್ವದಲ್ಲಿ ವೀಕ್ಷಣಾ ತಂಡ, ಬಿಎಸ್‌ಎಫ್ ಯೋಧರ ರಕ್ಷಣೆಯೊಂದಿಗೆ ಕೋಲ್ಕತ್ತಾಕ್ಕೆ ತೆರಳಿತ್ತು. ಆದರೆ ಕೇಂದ್ರ ತಂಡ ಮತ್ತು ಯೋಧರಿಗೆ ಗೆಸ್ಟ್‌ಹೌಸ್‌ ಹೊರಗೆ ಹೋಗಲೂ ರಾಜ್ಯ ಪೊಲೀಸರ ಅನುಮತಿ ಕಡ್ಡಾಯಗೊಳಿಸಿ, ಪ.ಬಂಗಾಲ ಕಟ್ಟಿಹಾಕಿತ್ತು ಎಂದು ಗೃಹ ಸಚಿವಾಲಯಕ್ಕೆ ತಂಡ ದೂರಿದೆ. ಕೇವಲ 6 ಗಂಟೆ ಮಾತ್ರವೇ ವಸ್ತುಸ್ಥಿತಿ ಪರಿಶೀಲನೆಗೆ ಅವಕಾಶ ಮಾಡಿಕೊಡಲಾಗಿತ್ತು. ದೀದಿ ಸರಕಾರದ ಈ ಕ್ರಮಕ್ಕೆ ಶಾ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಕೇವಲ ಎರಡು ಕ್ಷೇತ್ರ, 1 ಕ್ವಾರಂಟೈನ್‌ ಕೇಂದ್ರಕ್ಕೆ ಮಾತ್ರವೇ ಭೇಟಿ ಕೊಡಲು ತಂಡಕ್ಕೆ ಸಾಧ್ಯವಾಗಿದೆ. ಒಂದು ದಿನದಲ್ಲಿ ಕೇವಲ 400 ಮಂದಿಯನ್ನು ಮಾತ್ರವೇ ಪರೀಕ್ಷೆಗೊಳಪಡಿಸುತ್ತಿರುವ ದೀದಿ ಸರಕಾರ, ಕೇಂದ್ರ ಅಪೇಕ್ಷಿಸಿರುವ ನಿತ್ಯ ಕನಿಷ್ಠ 900 ಶಂಕಿತರ ಪರೀಕ್ಷೆ ಮಾಡುವಲ್ಲಿ ಸಂಪೂರ್ಣ ವಿಫ‌ಲವಾಗಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next