Advertisement

Rameshwaram Cafe Case; ತುಮಕೂರಿನಲ್ಲಿ ಶಂಕಿತ ಉಗ್ರನಿಗೆ ಹುಡುಕಾಟ

12:04 AM Mar 07, 2024 | Team Udayavani |

ತುಮಕೂರು(ಗ್ರಾಮಾಂತರ): ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಉಗ್ರನ ಸುಳಿವಿಗಾಗಿ ತುಮಕೂರಿನಲ್ಲಿ ಹುಡುಕಾಟ ನಡೆಸಲಾಗಿದೆ. ಬುಧವಾರ ತುಮಕೂರಿನ ರೈಲು ನಿಲ್ದಾಣ, ಮಂಡಿಪೇಟೆ ಸಹಿತ ನಗರದ ಹಲವೆಡೆ ಹುಡುಕಾಟ ನಡೆಸಲಾಗಿದೆ.

Advertisement

ಅನುಮಾನಾಸ್ಪದ ಪ್ರದೇಶದಲ್ಲಿ ಶಂಕಿನ ಉಗ್ರನ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ ಎನ್ನಲಾಗಿದೆ. ಬೆಂಗಳೂರಿನಿಂದ ಸುಮಾರು 28 ವಾಹನಗಳಲ್ಲಿ ಆಗಮಿಸಿರುವ ಪೊಲೀಸರು, ಇಬ್ಬರು ಡಿಸಿಪಿ ನೇತೃತ್ವದಲ್ಲಿ ಹಾಗೂ ತುಮಕೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಶೋಕ್‌ ಕೆ.ವಿ., ಡಿವೈಎಸ್‌ಪಿ ಚಂದ್ರಶೇಖರ್‌ ಸಹಿತ ಹಲವು ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ.

ರೈಲು ನಿಲ್ದಾಣ ಸಹಿತ ನಗರದ ಕೆಲವೆಡೆಗಳ ಸಿಸಿ ಕೆಮರಾಗಳ ತುಣುಕುಗಳನ್ನು ಪರಿಶೀಲಿಸಲಾಗಿದೆ. ಶಂಕಿತ ಬಾಂಬರ್‌ ಮಾ.1ರಂದು ತುಮಕೂರಿನಲ್ಲಿ ಓಡಾಡಿರುವ ಶಂಕೆ ಹಿನ್ನೆಲೆಯಲ್ಲಿ ಎನ್‌ಐಎ ತಂಡದ ಜತೆಯಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next