Advertisement
ನಾಡದೋಣಿ ಮೀನುಗಾರಿಕೆಯು ಕೋಡಿ, ಗಂಗೊಳ್ಳಿ, ಮರವಂತೆ, ಕೊಡೇರಿ ಭಾಗದಲ್ಲಿ ಇನ್ನೂ ಕೂಡ ಆರಂಭವಾಗಿಲ್ಲ. ಕಳೆದ ವರ್ಷ ಜು. 16ಕ್ಕೆ ಕೋಡಿ, ಗಂಗೊಳ್ಳಿ ಭಾಗದಲ್ಲಿ ನಾಡದೋಣಿ ಮೀನುಗಾರರು ಕಡಲಿಗಿಳಿದಿದ್ದರು. ಆದರೆ ಈ ಬಾರಿ ಈಗಷ್ಟೇ ಮಳೆ ಚುರುಕುಗೊಂಡಿದ್ದು, ಸಮುದ್ರದಲ್ಲಿ ಅಲೆಗಳ ಅಬ್ಬರವೂ ಹೆಚ್ಚಾಗಿದೆ. ಸಮುದ್ರ ಶಾಂತವಾದ ಬಳಿಕವಷ್ಟೇ ಮೀನುಗಾರಿಕೆಗೆ ತೆರಳಬಹುದು. ಅಂದರೆ ಜು. 23ರಿಂದ ಜು. 25ರೊಳಗೆ ಆರಂಭಗೊಳ್ಳುವ ನಿರೀಕ್ಷೆಯಿದೆ.
ಇಷ್ಟೊತ್ತಿಗಾಗಲೇ ನಾಡದೋಣಿ ಮೀನುಗಾರಿಕೆ ಆರಂಭವಾಗಿದ್ದರೆ, ಮೀನುಗಾರರಿಗೆ ಉತ್ತಮ ಆದಾಯ ಸಿಗುತ್ತಿತ್ತು. ಈ ವೇಳೆ ಚಟಿÉ (ಸಿಗಡಿ) ಸಿಗುವ ಸಮಯವಾಗಿದ್ದು, ಸಿಗಡಿಗೆ ಉತ್ತಮ ಬೆಲೆ ಸಿಗುವುದರಿಂದ ಹೆಚ್ಚಿನ ಲಾಭವಾಗುತ್ತಿತ್ತು. ಆದರೆ ಇನ್ನೂ ಕಡಲಿಗಿಳಿಯದಿದ್ದುದರಿಂದ ಪ್ರತಿಯೊಬ್ಬ ಮೀನುಗಾರರಿಗೆ ಕನಿಷ್ಠ 30 ಸಾವಿರ ರೂ. ವರೆಗೆ ನಷ್ಟವಾಗಿದೆ. ಒಟ್ಟಾರೆ ದೋಣಿಗೆ ಲಕ್ಷ ರೂ.ಯಂತೆ, ಕೋಟ್ಯಂತರ ರೂ. ನಷ್ಟ ಉಂಟಾಗಿದೆ.
Related Articles
ಈಗ ಭಾರೀ ಮಳೆಯಾಗುತ್ತಿರು ವುದರಿಂದ ಇಲಾಖೆಯಿಂದಲೇ ಸಮುದ್ರಕ್ಕಿಳಿಯದಂತೆ ಮುನ್ಸೂಚನೆ ಬಂದಿದೆ. ಮಳೆ ಕಡಿಮೆಯಾಗಿ, ಸಮುದ್ರ ಶಾಂತವಾದ ಬಳಿಕ ನಾಡದೋಣಿ ಮೀನುಗಾರಿಕೆ ಆರಂಭವಾಗಬಹುದು.
-ಮಂಜು ಬಿಲ್ಲವ, ಅಧ್ಯಕ್ಷರು, ಗಂಗೊಳ್ಳಿ ನಾಡದೋಣಿ ಮೀನುಗಾರರ ಸಂಘ
Advertisement
ಮೀನಿನ ದರ ಗಗನಕ್ಕೆಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧವಿದ್ದು, ನಾಡದೋಣಿ ಮೀನುಗಾರಿಕೆ ಇನ್ನೂ ಆರಂಭ ಗೊಂಡಿಲ್ಲ. ಇದರಿಂದ ಮಾರುಕಟ್ಟೆಯಲ್ಲಿ ಮೀನಿನ ದರ ದುಬಾರಿಯಾಗಿದೆ. ಮೀನಿನ ಖಾದ್ಯಗಳಂತೂ ಮತ್ತೂ ದುಪ್ಪಟ್ಟಾಗಿವೆೆ. 3 ಬಂಗುಡೆಗೆ 100 ರೂ. ಇದ್ದರೆ, 1 ಕೆ.ಜಿ. ಬಂಗುಡೆಗೆ 230 ರಿಂದ 250 ರೂ.ವರೆಗೆ ದರವಿದೆ. 1 ಕೆ.ಜಿ. ಬೂತಾಯಿ (ಬೈಗೆ) ಗೆ 150ರಿಂದ 170 ರೂ. ವರೆಗೂ ಮಾರಾಟವಾಗ್ತಿದೆ. ಕೊಡ್ವಾಯಿಗೆ 150 ರೂ. ಇದೆ. ಹೊಳೆ ಮೀನುಗಳಿಗೂ ಭಾರೀ ಬೇಡಿಕೆಯಿದ್ದು, ಕಾಣೆ ಮೀನು ಕೆ.ಜಿ.ಗೆ 700 ರೂ. ನಿಂದ 1000 ರೂ. ವರೆಗೂ ಮಾರಾಟವಾಗ್ತಿದೆ. ಹೊಳೆ ಬೈಗೆಗೆ ಕೆ.ಜಿ.ಗೆ 500 ರೂ. ವರೆಗೆ ಬೇಡಿಕೆಯಿದೆ.