Advertisement

ಕೇರಳದಲ್ಲಿ ಕಡಲಬ್ಬರ ಸಾಧ್ಯತೆ…ಮುನ್ನೆಚ್ಚರಿಕೆ ವಹಿಸಲು ಸೂಚನೆ

12:06 AM Feb 16, 2023 | Team Udayavani |

ಕುಂಬಳೆ : ಕೇರಳದ ಕರಾವಳಿ ತೀರ ಸಮುದ್ರದಲ್ಲಿ ಭಾರೀ ಕಡಲ್ಕೊರೆತ ಸಾಧ್ಯವೆಂಬುದಾಗಿ ಕೇಂದ್ರ ಸಮುದ್ರ ಸ್ಥಿತಿ ಅಧ್ಯಯನ ಸಂಸೋಧನ ಕೇಂದ್ರ (ಐನ್‌ಸಿಒಐಸ್‌) ಎಚ್ಚರಿಕೆ ನೀಡಿದೆ.

Advertisement

ಆದುದರಿಂದ ಕರಾವಳಿ ಪ್ರದೇಶದಲ್ಲಿ ವಾಸಿಸುವವರು ಮತ್ತು ಬೆಸ್ತರು ಜಾಗೃತರಾಗಿರಬೇಕಾಗಿ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಫೆ. 16ರಂದು ರಾತ್ರಿ ತನಕ ಕಡಲ್ಕೊರೆತ ಮತ್ತು ಸಮುದ್ರ ಅಬ್ಬರದಿಂದ ಅನಾಹುತವಾಗುವ ಸಾಧ್ಯತೆ ಇದ್ದು ಸಮುದ್ರ ಕಿನಾರೆಯಲ್ಲಿ ವಾಸಿಸುವ ಮನೆಯವರು ಕರಾವಳಿಯಿಂದ ತತ್ಕಾಲಕ್ಕೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ವಿನಂತಿಸಿದೆ.

ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವೂ ಸಮುದ್ರ ಕಿನಾರೆಯ ಪಾರ್ಕ್‌ ಮತ್ತು ಬೀಚ್‌ ಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲು ನಿರ್ದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next