Advertisement

ಬಿಜೆಪಿ ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ

02:40 AM Jul 18, 2017 | Karthik A |

ಉಡುಪಿ: ಎಸ್‌ಡಿಪಿಐ ಸದಸ್ಯರಿಂದ ಜು. 17ರಂದು ಬಿಜೆಪಿ ವಿರುದ್ಧ ಉಡುಪಿ ಕ್ಲಾಕ್‌ ಟವರ್‌ ಬಳಿ ಪ್ರತಿಭಟನ ಸಭೆ ನಡೆಯಿತು. ಪ್ರಚೋದನಕಾರಿ ಭಾಷಣ ಮಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಅವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವಂತೆ ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್ ಇಂಡಿಯಾ ಸದಸ್ಯರು ಆಗ್ರಹಿಸಿದರು.

Advertisement

ಶರತ್‌ ಮಡಿವಾಳ ಅವರ ಕೊಲೆಯ ಹಿನ್ನಲೆಯಲ್ಲಿ ಇತ್ತೀಚೆಗೆ ಬಿಎಸ್‌ವೈ, ನಳಿನ್‌ಕುಮಾರ್‌ ಕಟೀಲ್‌ ಮತ್ತು ಶೋಭಾ ಕರಂದ್ಲಾಜೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿ ಶಾಂತತೆಯನ್ನು ಕದಡುತ್ತಿದ್ದಾರೆ ಎಂದು ಮುಖಂಡರು ಆಗ್ರಹಿಸಿದರು. ಎಸ್‌ಡಿಪಿಐ ಅಧ್ಯಕ್ಷ ಅಸೀಫ್ ಕೋಟೇಶ್ವರ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ರಿಯಾಝ್ಫ‌ ರಂಗಿಪೇಟೆ, ಪಿಎಫ್ಐ ಮಂಗಳೂರು ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಜೋಕಟ್ಟೆ ದಿಕ್ಸೂಚಿ ಭಾಷಣ ಮಾಡಿದರು. ಎಸ್‌ಡಿಟಿಯು ರಾಜ್ಯ ಸಂಚಾಲಕ ಅಬ್ದುಲ್‌ ಜಲೀಲ್‌, ಕ.ಕೋ.ಸೌ. ವೇದಿಕೆ ಉಡುಪಿ ಅಧ್ಯಕ್ಷ ಜಿ. ರಾಜಶೇಖರ್‌, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹುಸೈನ್‌ ಕೋಡಿಬೆಂಗ್ರೆ, ವಿಲಿಯಂ ಮಾರ್ಟಿಸ್‌ ಮತ್ತಿತರರು ಉಪಸ್ಥಿತರಿದ್ದರು. ಎಸ್‌ಡಿಪಿಐ ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ರೆಹಮಾನ್‌ ಮಲ್ಪೆ ಪ್ರಾಸ್ತಾ ವಿಸಿದರು. ನಝೀರ್‌ ಅಹ್ಮದ್‌ ವಂದಿಸಿದರು. ಸಲೀಂ ಕೊಡಂಕೂರು ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next