Advertisement

ರಾಷ್ಟ್ರಮಟ್ಟದ ಸಾಕ್ಷ್ಯ ಚಿತ್ರೋತ್ಸವದಲ್ಲಿ ಎಸ್‌.ಡಿ.ಎಂ. ಗೆ ಪ್ರಥಮ ಸ್ಥಾನದ ಗರಿ  

07:24 PM Jun 14, 2022 | Team Udayavani |

ಬೆಳ್ತಂಗಡಿ: ಮಂಗಳೂರಿನ ಸೈಂಟ್‌ ಅಲೋಶಿಯಸ್‌ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ್ದ ರಾಷ್ಟ್ರಮಟ್ಟದ ಸಾಕ್ಷ್ಯಚಿತ್ರ ಮತ್ತು ಕಿರುಚಿತ್ರೋತ್ಸವದಲ್ಲಿ ಎಸ್‌.ಡಿ. ಎಂ. ಕಾಲೇಜು ಉಜಿರೆ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳ ನಿರ್ಮಾಣದ ಸಾಕ್ಷ್ಯಚಿತ್ರ ಪ್ರಥಮ ಸ್ಥಾನದ ಗರಿ ಪಡೆದುಕೊಂಡಿದೆ.

Advertisement

ಕಾಸರಗೋಡು ಸೀರೆ ಕೈಮಗ್ಗದ ಕುರಿತ ಸಾಕ್ಷ್ಯಚಿತ್ರ ಇದಾಗಿದ್ದು ಕೈಮಗ್ಗದ ವಾಸ್ತವತೆ, ನೇಕಾರರ ದಿನಚರಿಯ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ರಾಮ್‌ ಮೋಹನ್‌ ಭಟ್‌ ಎಚ್‌. ಅವರ ಸಾಹಿತ್ಯ ನಿರ್ದೇಶನವಿದೆ.

ಇದನ್ನೂ ಓದಿ:ಕೈಕೊಟ್ಟ ಮುಂಗಾರು ಮಳೆ,ಒಣಗುತ್ತಿರುವ ಬೆಳೆ; ರೈತರಲ್ಲಿ ಹೆಚ್ಚಿದ ಆತಂಕ

ಈ ಸಾಕ್ಷ್ಯ ಚಿತ್ರಕ್ಕೆ ಸಂಪತ್‌ ಕುಮಾರ್‌ ರೈ ಛಾಯಾಗ್ರಹಣ ಹಾಗೂ ರಕ್ಷಿತ್‌ ರೈ ಸಂಕಲನದಲ್ಲಿ ಭಾಗಿಯಾಗಿದ್ದರು. ಶ್ರುತಿ ಜೈನ್‌ ಅವರ ಹಿನ್ನೆಲೆ ಧ್ವನಿಯಿದೆ. ಶ್ರೀರಕ್ಷಾ ಶಂಕರ್‌ ಮತ್ತು ಶಾಮ ಪ್ರಸಾದ್‌ ತಂಡದ ಭಾಗವಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next