Advertisement

PM ವಿರುದ್ಧ ‘ಚೇಳು­ ಹೇಳಿಕೆ’ ವಿವಾದ: ತರೂರ್‌ ಸುಪ್ರೀಂ ಮೊರೆ

12:55 AM Sep 10, 2024 | Team Udayavani |

ಹೊಸದಿಲ್ಲಿ: ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿ­ದಂತೆ ತಮ್ಮ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕು ಎಂದು ಶಶಿ ತರೂರ್‌ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಪ್ರಕರಣ ಸಂಬಂಧ ದಿಲ್ಲಿ ಹೈಕೋರ್ಟ್‌ನಲ್ಲಿ ಇಂದು(ಮಂಗ­ಳವಾರ) ಶಶಿ ತರೂರ್‌ ವಿಚಾರಣೆಗೆ ಹಾಜರಾಗ­ಬೇಕಿದೆ.

Advertisement

ಪ್ರಧಾನಿ ಮೋದಿಯನ್ನು ಗುರಿಯಾಗಿಸಿ “ಶಿವಲಿಂಗದ ಮೇಲಿನ ಚೇಳು’ ಎಂದು ಹೇಳಿಕೆ ನೀಡಿದ್ದ ಶಶಿ ತರೂರ್‌ ವಿರುದ್ಧ ಮಾನಹಾನಿ ಪ್ರಕರ­ಣವೊಂದು ದಾಖಲಾಗಿತ್ತು. ಈ ಪ್ರಕರಣವನ್ನು ರದ್ದು­ಗೊಳಿಸಲು ದಿಲ್ಲಿ ಹೈಕೋರ್ಟ್‌ ನಿರಾಕರಿಸಿ­ದ್ದನ್ನು ಪ್ರಶ್ನಿಸಿ ಶಶಿ ತರೂರ್‌ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮನವಿಗೆ ಪ್ರತಿಕ್ರಿಯಿಸಿದ ಸಿಜೆಐ ಚಂದ್ರಚೂಡ್‌ ಅವರಿದ್ದ ಪೀಠ “ಇಮೇಲ್‌ ಮಾಡಿ. ನಾವು ಅರ್ಜಿ ಪರಿಶೀಲಿಸುತ್ತೇವೆ’ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next