Advertisement

ಸ್ಕೂಟರ್‌ ಸ್ಕಿಡ್‌: ಸವಾರ ಸಾವು

01:22 AM Apr 12, 2023 | Team Udayavani |

ಮಂಗಳೂರು: ಸ್ಕೂಟರ್‌ ಸ್ಕಿಡ್‌ ಆಗಿ ಸವಾರ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕುಂಟಿಕಾನ ದಲ್ಲಿ ಮಂಗಳವಾರ ಸಂಭವಿಸಿದೆ.
ಪ್ರಭಾಕರ ಆಚಾರ್ಯ (55) ಮೃತಪಟ್ಟವರು. ಮೂಲತಃ ಬೆಳ್ತಂಗಡಿ ಮುಂಡೂರು ನಡುಮನೆ ನಿವಾಸಿಯಾ ಗಿದ್ದ ಅವರು ಮಂಗಳೂರಿನಲ್ಲಿ ಸೆಕ್ಯುರಿಟಿ ಗಾರ್ಡ್‌ ಆಗಿದ್ದರು.

Advertisement

ಬೆಳಗ್ಗೆ 6.30ಕ್ಕೆ ಕುಂಟಿಕಾನದಿಂದ ಕೆಪಿಟಿ ಕಡೆಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಎ.ಜೆ. ಆಸ್ಪತ್ರೆಯ ಎದುರು ಅವರ ಮುಂಭಾಗದಲ್ಲಿ ಹೋಗುತ್ತಿದ್ದ ಲಾರಿ ಚಾಲಕ ಎಡಕ್ಕೆ ಚಲಾಯಿಸಿಕೊಂಡು ಬಂದಿದ್ದರಿಂದ ಲಾರಿಯ ಹಿಂಬದಿಗೆ ಸ್ಕೂಟರ್‌ ಢಿಕ್ಕಿಯಾಗುವುದನ್ನು ತಪ್ಪಿಸುವ ಯತ್ನದಲ್ಲಿ ಒಮ್ಮೆಲೇ ಬ್ರೇಕ್‌
ಹಾಕಿದರು. ಪರಿಣಾಮವಾಗಿ ಸ್ಕೂಟರ್‌ ಸ್ಕಿಡ್‌ ಆಯಿತು. ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಅವರು ಚಿಕಿತ್ಸೆ ಫ‌ಲಕಾರಿಯಾಗದೆ ಆಸ್ಪತ್ರೆಯಲ್ಲಿ ಮಧ್ಯಾಹ್ನ ಮೃತಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next