Advertisement

Mangaluru: ಲಾರಿ ಅಡಿಗೆ ಬಿದ್ದು ಸ್ಕೂಟರ್‌ ಸವಾರ ಸಾವು

09:51 PM Oct 12, 2024 | Team Udayavani |

ಮಂಗಳೂರು: ಪಡೀಲ್‌ನ ಪೆಟ್ರೋಲ್‌ಪಂಪ್‌ ಮುಂಭಾಗದಲ್ಲಿ ಶುಕ್ರವಾರ ರಾತ್ರಿ ಲಾರಿಗೆ ಸ್ಕೂಟರ್‌ ಢಿಕ್ಕಿಯಾಗಿ ಸವಾರನ ಮೇಲೆ ಚಕ್ರಗಳು ಹರಿದ ಪರಿಣಾಮ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.

Advertisement

ಪಡೀಲ್‌ನ ಇಂಡಿಯನ್‌ ಪೆಟ್ರೋಲ್‌ನಿಂದ ರಾತ್ರಿ 9 ಗಂಟೆ ವೇಳೆಗೆ ಲಾರಿ ಚಾಲಕ ಮಲ್ಲಿಕಾರ್ಜುನ್‌ ಎಂಬಾತ ಫರಂಗಿಪೇಟೆ ಕಡೆಗೆ ತೆರಳುವ ಉದ್ದೇಶದಿಂದ ಹೆದ್ದಾರಿಯಲ್ಲಿ ನಿರ್ಲಕ್ಷ್ಯದಿಂದ ಲಾರಿಯನ್ನು ಎಡಕ್ಕೆ ತಿರುಗಿಸಿದ್ದಾನೆ. ಈ ವೇಳೆ ಪಡೀಲ್‌ ಜಂಕ್ಷನ್‌ ಕಡೆಯಿಂದ ಸ್ಕೂಟರ್‌ ಸವಾರ ಅಡ್ಯಾರ್‌ಪದವು ನಿವಾಸಿ ಜೋಸೆಫ್‌ ಕೆ.ಕೆ. (52) ವೇಗವಾಗಿ ಬಂದಿದ್ದು, ಎದುರಿನಲ್ಲಿ ಮೊಹಮ್ಮದ್‌ ಅಲ್ಫಿಯಾನ್‌ ಎನ್ನುವವರು ಚಲಾಯಿಸುತ್ತಿದ್ದ ಸ್ಕೂಟರ್‌ನಲ್ಲಿ ಸಹಸವಾರರಾಗಿದ್ದ ಟಿ.ಮೊಹಮ್ಮದ ಶಾಹೀರ್‌ನ ಎಡ ಕಾಲಿಗೆ ಸ್ಕೂಟರ್‌ ತಾಗಿಸಿ, ಲಾರಿಯ ಹಿಂದಿನ ಬಲ ಬದಿಯ ಚಕ್ರದ ಕೆಳಗೆ ಸ್ಕೂಟರ್‌ ಸಮೇತಾ ಬಿದ್ದಿದ್ದಾರೆ. ಲಾರಿಯ ಚಕ್ರವು ಸ್ಕೂಟರ್‌ ಸವಾರನ ಮೇಲೆ ಸಾಗಿದೆ.

ಅಪಘಾತದ ಪರಿಣಾಮ ಜೋಸೆಫ್‌ ಅವರ ಮುಖಕ್ಕೆ, ಎದೆಗೆ, ತಲೆಗೆ ಗಂಭೀರ ಸ್ವರೂಪದ ರಕ್ತ ಗಾಯ, ಬಲಗೈ ಮೂಳೆ ಮುರಿತ ಮತ್ತು ಎಡ ಕೈ ತುಂಡಾಗಿದೆ. ತತ್‌ಕ್ಷಣ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಈ ವೇಳೆ ಅವರು ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಟಿ.ಮೊಹಮ್ಮದ್‌ ಶಾಹೀರ್‌ ಅವರು ಎಡಕಾಲಿಗೂ ಗಾಯವಾಗಿದ್ದು ಪಡೀಲ್‌ನ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ನಗರ ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next